ಕರ್ನಾಟಕ

karnataka

By

Published : Aug 7, 2020, 3:49 PM IST

ETV Bharat / sports

ಕೈಯಲ್ಲಿ ಶೂ, ನೀರಿನ ಬಾಟಲಿ ಹಿಡಿದು 12ನೇ ಆಟಗಾರನಾಗಿ ಅಂಗಣಕ್ಕೆ ಬಂದ ಸರ್ಫರಾಜ್‌!

ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಸರ್ಫರಾಜ್​ ಅಹ್ಮದ್​ ನಿನ್ನೆ ಸಹ ಆಟಗಾರನಿಗೋಸ್ಕರ ಕೈಯಲ್ಲಿ ಶೂ, ನೀರಿನ ಬಾಟಲಿ ಹಿಡಿದುಕೊಂಡು ಮೈದಾನಕ್ಕೆ ಬಂದಿದ್ದರು. ಈ ಘಟನೆ ಮಾಜಿ ಆಟಗಾರರ​ ಟೀಕೆಗೆ ಕಾರಣವಾಗಿದೆ.

former captain Sarfaraz Ahmed
former captain Sarfaraz Ahmed

ಮ್ಯಾಂಚೆಸ್ಟರ್​:ಪಾಕಿಸ್ತಾನ-ಇಂಗ್ಲೆಂಡ್​ ನಡುವೆ ಟೆಸ್ಟ್ ಸರಣಿಯ ಮೊದಲ​​ ಪಂದ್ಯ ನಿನ್ನೆ ಆರಂಭಗೊಂಡಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿರುವ ಆತಿಥೇಯ​ರು 326 ರನ್​ಗಳಿಕೆ ಮಾಡಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಮೈದಾನದಲ್ಲಿ ಕುತೂಹಲಕಾರಿ ಸನ್ನಿವೇಶ ನಡೆಯಿತು.

ಪಾಕ್​ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಸರ್ಫರಾಜ್​ ಅಹ್ಮದ್​ 12ನೇ ಆಟಗಾರನಾಗಿ ಮೈದಾನಕ್ಕಿಳಿದು ಸಹ ಆಟಗಾರನಿಗೋಸ್ಕರ ಶೂ, ನೀರಿನ ಬಾಟಲಿ ತೆಗೆದುಕೊಂಡು ಬಂದಿದ್ದರು. ಈ ಘಟನೆ ಪಾಕಿಸ್ತಾನದ ಮಾಜಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕ್​ ತಂಡದ ಮಾಜಿ ನಾಯಕನೊಬ್ಬನನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಶೋಭೆ ತರುವಂಥದ್ದಲ್ಲ. ಒಂದ್ವೇಳೆ ಅವರೇ ಸ್ವಯಂಪ್ರೇರಿತರಾಗಿ ಈ ರೀತಿ ನಡೆದುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಇಂಥ ಬೆಳವಣಿಗೆಗಳನ್ನು ತಡೆಯಿರಿ ಎಂದು ಪಾಕ್​ ತಂಡದ ಮಾಜಿ ವೇಗದ ಬೌಲರ್​ ಶೋಯಬ್​ ಅಖ್ತರ್ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೆ ತಿಳಿಸಿದ್ದಾರೆ.

ಸರ್ಫರಾಜ್‌ ಸಾಧನೆ:

2016ರ ಟಿ-20 ವಿಶ್ವಕಪ್ ಬಳಿಕ​ ತಂಡದ ನಾಯಕನಾಗಿ ನೇಮಕಗೊಂಡಿರುವ​ ಸರ್ಫರಾಜ್​ ಅಹ್ಮದ್​, ಪಾಕ್​ ತಂಡವನ್ನು ನಾಲ್ಕು ವರ್ಷಗಳ ಕಾಲ ಮುನ್ನಡೆಸಿದ್ದರು. 2017ರ ಚಾಂಪಿಯನ್​ ಟ್ರೋಫಿಯಲ್ಲಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದೀಗ ನಾಯಕತ್ವ ಜವಾಬ್ದಾರಿಯಿಂದ ಅವರನ್ನು ಕೆಳಗಿಳಿಸಲಾಗಿದೆ.

​2017ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ಚಾಂಪಿಯನ್​ ಟ್ರೋಫಿಯಲ್ಲಿ ಸರ್ಫರಾಜ್​ ಅಹ್ಮದ್ ನೈತೃತ್ವದ ಪಾಕ್​ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಕಳೆದ ವರ್ಷ ನಡೆದ ವಿಶ್ವಕಪ್​​ ಸೆಮಿಫೈನಲ್​ವರೆಗೂ ತಂಡವನ್ನು ಇವರು ಲೀಡ್‌ ಮಾಡಿದ್ದರು.

ABOUT THE AUTHOR

...view details