ಕರ್ನಾಟಕ

karnataka

By

Published : Dec 30, 2019, 11:57 AM IST

ETV Bharat / sports

ಕ್ರಿಕೆಟ್​ ಅಸೋಸಿಯೇಷನ್ ವಿಸರ್ಜನೆಗೆ ಗಂಭೀರ್ ಒತ್ತಾಯ...ಡಿಡಿಸಿಎ ಸಾಮಾನ್ಯ ಸಭೆಯಲ್ಲಿ ಘರ್ಷಣೆ

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವಿಸರ್ಜಿಸಬೇಕು ಎಂದು ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್,​ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಮನವಿ ಮಾಡಿದ್ದಾರೆ.

ಡಿಡಿಸಿಎ ಸಾಮಾನ್ಯ ಸಭೆಯಲ್ಲಿ ಘರ್ಷಣೆ, Gambhir said to dissolve DDCA
ಕ್ರಿಕೆಟ್​ ಅಸೋಸಿಯೇಷನ್ ವಿಸರ್ಜಿಸುವಂತೆ ಗಂಭೀರ್ ಮನವಿ

ನವದೆಹಲಿ:ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘರ್ಷಣೆ ಸಂಭವಿಸಿದೆ. ಈ ನಡುವೆ, ಡಿಡಿಸಿಎ ವಿಸರ್ಜನೆ ಮಾಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಮತ್ತು ಸಂಸದ ಗೌತಮ್​ ಗಂಭೀರ್ ಆಗ್ರಹಿಸಿದ್ದಾರೆ.

ನಿನ್ನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಸಭೆಯಲ್ಲಿ ಘರ್ಷಣೆ ನಡೆದ ವಿಡಿಯೋವನ್ನ ಟ್ವೀಟ್​ ಮಾಡಿರುವ ಗೌತಮ್​ ಗಂಭೀರ್​, ಕೆಲವು ವಂಚಕರು ಸಂಘಟನೆಯನ್ನು ಹೇಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ನೋಡಿ. ಬಿಸಿಸಿಐ ಕೂಡಲೇ ಡಿಡಿಸಿಎ ವಿಸರ್ಜಿಸುವುದರ ಜೊತೆಗೆ ಘರ್ಷಣೆಯಲ್ಲಿ ಭಾಗಿಯಾದವರನ್ನು ಜೀವಿತಾವಧಿಯವರೆಗೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಅಂಗೀಕರಿಸಿದ ನಿರ್ಧಾರವನ್ನ ಸದಸ್ಯರು ಒಪ್ಪದ ಕಾರಣ ಈ ಘಟನೆ ನಡೆದಿದೆ. ಘರ್ಷಣೆಯಲ್ಲಿ ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದಾ ಕೂಡ ಇದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ನಡೆದ ನಂತರ ರಜತ್ ಶರ್ಮಾ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಭೆಯಲ್ಲಿ ಐದು ಅಂಶಗಳನ್ನ ನಿರ್ಣಯಿಸಿ ಅಳವಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೆಲವು ಚರ್ಚೆ ನಡೆಸಿದ್ದೇವೆ. ಆದರೆ, ಆ ಚರ್ಚೆ ಪ್ರಸ್ತಾಪಿಸಲು ಯೋಗ್ಯವಾಗಿಲ್ಲ ಎಂದು ಡಿಡಿಸಿಎ ನಿರ್ದೇಶಕ ಸಂಜಯ್ ಭಾರದ್ವಾಜ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ABOUT THE AUTHOR

...view details