ಹೈದರಾಬಾದ್: ಚೆಂಡು ಹೊಳೆಡಯುವಂತೆ ಮಾಡಲು ಉಗುಳು ಹಚ್ಚುವ ಅಗತ್ಯವಿಲ್ಲ, ಅದರ ಬದಲು ಬೆವರನ್ನು ಬಳಸಬಹುದು ಎಂದು ಈ ಟಿವಿ ಭಾರತಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕ್ರಿಕೆಟರ್ ಶ್ರೀಶಾಂತ್ ತಿಳಿಸಿದ್ದಾರೆ.
ಕೋವಿಡ್ 19 ಭೀತಿಯಿಂದ ಚೆಂಡು ಹೊಳೆಯುವಂತೆ ಮಾಡಲು ಉಗುಳು ಬಳಸುವುದನ್ನಐಸಿಸಿ ನಿಷೇಧಿಸಿತ್ತು. ಈ ವಿಚಾರದ ಬಗ್ಗೆ ಹಲವು ಮಾಜಿ, ಹಾಲಿ ಕ್ರಿಕೆಟಿಗರು ಪರ ವಿರೋಧ ಹೇಳಿಕೆ ನೀಡಿದ್ದರು. ಹಾಗೆಯೆ ಪಾಕಿಸ್ತಾದ ಮಾಜಿ ವೇಗಿ ವಾಸಿಮ್ ಅಕ್ರಮ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು,; ಉಗುಳು ಬಳಕೆ ನಿಷೇಧದಿಂದ ಬೌಲರ್ಗಳಿ ರೋಬೋಟ್ಗಳಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು.
‘ನಾನು ಹೇಳುವುದೇನೆಂದರೆ ಕೊರೊನಾ ವೈರಸ್ಗೆ ಮುಂಚಿತವಾಗಿ ಅವರು ನಿವೃತ್ತಿಯಾಗಿರುವುದಕ್ಕೆ ನಾನು ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಹಶಃ ಜನರು ಕಮೆಂಟ್ ಮಾಡುವಾಗ ಅಥವಾ ಲೈವ್ ಸೆಷನ್ಗಳಲ್ಲಿ ಸುದ್ದಿ ಮಾಡಲು ಈ ರೀತಿ ಏನಾದರೂ ಹೇಳಬಹುದು. ಆದರೆ ನಾನು ಹಾಗೆ ಹೇಳುವುದಿಲ್ಲ’ ಎಂದಿದ್ದಾರೆ.
ಉಗುಳು ನಿಷೇಧವು ಕ್ರಿಕೆಟ್ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಯಾರ್ಕರ್ ಬೌಲ್ ಮಾಡಬೇಕಾದರೆ ಅದು ರಿವರ್ಸ್ ಸ್ವಿಂಗ್ ಮೂಲಕ ಮಾತ್ರವೇ ಹೊರತು ಸಾಮಾನ್ಯ ಸ್ವಿಂಗ್ ಮೂಲಕ ಅಲ್ಲ. ಬೆವರಿನಿಂದ ಚೆಂಡನ್ನು ನಿರ್ವಹಣೆ ಮಾಡಬಹುದು. ಆದರೆ ಪ್ರಸ್ತುತ ನಾವು ಸಾವು-ಬದುಕಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಎಲ್ಲರೂ ಉಗುಳು ನಿಷೇಧದ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ.
ಯಾವುದೇ ಬೌಲರ್ ತನ್ನ ಮೇಲೆ ವಿಶ್ವಾಸವನ್ನಿಟ್ಟು ಒಳ್ಳೆಯ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದರೆ ಖಂಡಿತವಾಗಿ ಯಶಸ್ಸು ಪಡೆಯುತ್ತಾನೆ ಮತ್ತು ಇಲ್ಲಿ ಯಾರೂ ರೋಬೋಟ್ಗಳಾಗುವುದಿಲ್ಲ ಎಂದು ಕೇರಳದ ವೇಗಿ ಹೇಳಿದ್ದಾರೆ.
ಇನ್ನು ಪ್ರಥಮ ದರ್ಜೆ ಕ್ರಿಕೆಟ್ಗೆ ಮರಳಲಿರುವ ಶ್ರೀಶಾಂತ್ ತಾವೂ ಕ್ರಿಕೆಟ್ಗೆ ಮರಳುವ ವಿಚಾರದ ಬಗ್ಗೆ ಬಿಸಿಸಿಐ ಆಧ್ಯಕ್ಷರೊಂದಿಗೆ ಮಾತನಾಡಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಸೌರವ್ ಗಂಗೂಲಿಯವರೊಂದಿಗೆ ಮಾತನಾಡದಿದ್ದರೂ ಬಿಸಿಸಿಐ ಜಂಟಿ ಕಾರ್ಯದರ್ಶಿ ಹಾಗೂ ಕ್ರಿಕೆಟ್ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ನನ್ನ ಮೇಲೆ ಗಮನ ಹರಿಸಬೇಕೆಂದು ದಾದಾ ಅವರಿಗೆ ತಿಳಿಸಿದ್ದಾರಂತೆ ಎಂದು ಶ್ರೀಶಾಂತ್ ಹೇಳಿದ್ದಾರೆ.