ಕೋಲ್ಕತ್ತಾ:ದೇಶದಲ್ಲಿ ಮೇ 3 ರವರೆಗೆ ಲಾಕ್ಡೌನ್ ವಿಸ್ತರಿಸಿ ಆದೇಶಿಸಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ನಿತೇಶ್ ರಾಣಾ ಟ್ವೀಟ್ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ.
'ನಿಮ್ಮ ಹೃದಯ ಕಳೆದುಕೊಳ್ಳಬೇಡಿ. ಸೂರ್ಯ ಮತ್ತೆ ಉದಯಿಸುತ್ತಾನೆ. ಕಷ್ಟ ಶಾಶ್ವತವಾಗಿ ಉಳಿಯುವುದಿಲ್ಲ' ಅನ್ನೋದು ಅವರ ಸ್ಫೂರ್ತಿದಾಯಕ ನುಡಿಮುತ್ತು.
ಲಾಕ್ಡೌನ್ ವಿಸ್ತರಣೆ ನಿರ್ಧಾರವನ್ನು ನಿತೀಶ್ ರಾಣಾ ಬೆಂಬಲಿಸಿದ್ದು, ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
ನಿತೀಶ್ ರಾಣಾ, ರಿಷಭ್ ಪಂತ್
ರಾಣಾ 2018ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮುನ್ನ ಇವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ 13 ಪಂದ್ಯಗಳಿಂದ 333ರನ್ ಸಿಡಿಸಿ ವಿಶಿಷ್ಠ ಸಾಧನೆ ತೋರಿ ಗಮನ ಸೆಳೆದಿದ್ದರು.