ಕರ್ನಾಟಕ

karnataka

By

Published : Sep 21, 2020, 7:01 PM IST

ETV Bharat / sports

ಚೆನ್ನೈ ಸೂಪರ್​ ಕಿಂಗ್ಸ್​ಗೆ ಸಿಹಿ ಸುದ್ದಿ.. ಗುಣಮುಖರಾದ ಋತುರಾಜ್​ ರಾಜಸ್ಥಾನ್​ ವಿರುದ್ಧ ಕಣಕ್ಕೆ ಸಾಧ್ಯತೆ

23 ವರ್ಷದ ಯುವ ಬ್ಯಾಟ್ಸ್​ಮನ್​ ಎರಡು ಕೋವಿಡ್​-19 ಪರೀಕ್ಷೆಗಳಲ್ಲೂ ನೆಗೆಟಿವ್​ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಅಂತಿಮವಾಗಿ ಸೋಮವಾರ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ತರಬೇತಿ ಕ್ಯಾಂಪ್​ಗೆ ಸೇರ್ಪಡೆಗೊಂಡಿದ್ದಾರೆ..

ಋತುರಾಜ್  ಗಾಯಕ್ವಾಡ್​
ಋತುರಾಜ್ ಗಾಯಕ್ವಾಡ್​

ದುಬೈ: ಕಳೆದು ಎರಡು ವಾರಗಳ ಹಿಂದೆ ಕೋವಿಡ್​-19 ಪರೀಕ್ಷೆಯಲ್ಲಿ ಪಾಸಿಟಿವ್​ ಆಗುವ ಮೂಲಕ ತಂಡದ ತರಬೇತಿಯಿಂದ ದೂರ ಉಳಿದಿದ್ದ ಸಿಎಸ್​ಕೆ ತಂಡದ ಯುವ ಬ್ಯಾಟ್ಸ್​ಮನ್​ ಋತುರಾಜ್ ಗಾಯಕ್ವಾಡ್​ ಪ್ರಸ್ತುತ ಸಂಪೂರ್ಣ ಗುಣಮುಖರಾಗಿದ್ದಾರೆ. ಸೆ.22ರಂದು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ತಂಡದ ಅನುಭವಿಗಳಾದ ಸುರೇಶ್​ ರೈನಾ ಮತ್ತು ಹರ್ಭಜನ್​ ಸಿಂಗ್​ರ ಸೇವೆಯನ್ನು ಸಿಎಸ್​ಕೆ ತಪ್ಪಿಸಿಕೊಳ್ಳುತ್ತಿದೆ. ಅದರ ಮಧ್ಯೆ ದೀಪಕ್​ ಚಹಾರ್​ ಮತ್ತು ಋತುರಾಜ್​ ಗಾಯಕ್ವಾಡ್​ ಕೊರೊನಾ ಪಾಸಿಟಿವ್​ ಆದ ಕಾರಣ ತರಬೇತಿಯಿಂದ ಹೊರಬಿದ್ದಿದ್ದರು. ಆರಂಭಿಕ ಪಂದ್ಯಕ್ಕೆ 2 ದಿನಗಳಿರುವಾಗ ದೀಪಕ್​ ಚಹಾರ್​ ಕೋವಿಡ್​-19 ಪರೀಕ್ಷೆಗೊಳಪಟ್ಟು ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ, ಗಾಯಕ್ವಾಡ್​ಗೆ ಪಾಸಿಟಿವ್​ ಬಂದಿದ್ದರಿಂದ ಕ್ವಾರಂಟೈನ್​ ಮುಂದುವರಿಸಿದ್ದರು.

ಇದೀಗ 23 ವರ್ಷದ ಯುವ ಬ್ಯಾಟ್ಸ್​ಮನ್​ ಎರಡು ಕೋವಿಡ್​-19 ಪರೀಕ್ಷೆಗಳಲ್ಲೂ ನೆಗೆಟಿವ್​ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಅಂತಿಮವಾಗಿ ಸೋಮವಾರ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ತರಬೇತಿ ಕ್ಯಾಂಪ್​ಗೆ ಸೇರ್ಪಡೆಗೊಂಡಿದ್ದಾರೆ.

ಇಂಡಿಯಾ ಎ ತಂಡದಲ್ಲಿ ಖಾಯಂ ಸದಸ್ಯನಾಗಿರುವ ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಸುರೇಶ್​ ರೈನಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಕ್ವಾಡ್​ ತಂಡಕ್ಕೆ ಸೇರ್ಪಡೆಗೊಂಡರೆ ಆರಂಭಿಕ ಮುರುಳಿ ವಿಜಯ್ ತಂಡದಿಂದ ಹೊರ ಬೀಳಲಿದ್ದಾರೆ. ನಂತರ ಡುಪ್ಲೆಸಿಸ್​ ಅಥವಾ ರಾಯುಡು ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ.

ABOUT THE AUTHOR

...view details