ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಹುಡುಗ ಶ್ರೇಷ್ಠ ಆಟಗಾರನಾಗಿದ್ದಾನೆ : ವಿರೇಂದ್ರ ಸೆಹ್ವಾಗ್​ - Brisbane Test

ಸರಣಿ ಆರಂಭಕ್ಕೂ ಮುನ್ನ ಟೆಸ್ಟ್​ ತಂಡಕ್ಕೆ ಸಿರಾಜ್​ ಆಯ್ಕೆಯಾಗಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಯುವ ವೇಗಿ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅವರು ಆಡಿರುವ ಮೂರು ಪಂದ್ಯಗಳಿಂದ 13 ವಿಕೆಟ್​ ಪಡೆದು ಮಿಂಚಿದ್ದಾರೆ..

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ವಿರೇಂದ್ರ ಸೆಹ್ವಾಗ್

By

Published : Jan 18, 2021, 5:33 PM IST

Updated : Jan 18, 2021, 5:40 PM IST

ನವದೆಹಲಿ :ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೊನೆಯ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದಿರುವ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್​ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​, ಸರಣಿ ಶ್ರೇಷ್ಠ ಪ್ರಶಸ್ತಿ ಸಿರಾಜ್​ಗೆ ಸಿಗಬೇಕೆಂದು ಆಶಿಸಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ಟೆಸ್ಟ್​ ತಂಡಕ್ಕೆ ಸಿರಾಜ್​ ಆಯ್ಕೆಯಾಗಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಯುವ ವೇಗಿ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅವರು ಆಡಿರುವ ಮೂರು ಪಂದ್ಯಗಳಿಂದ 13 ವಿಕೆಟ್​ ಪಡೆದು ಮಿಂಚಿದ್ದಾರೆ.

"ಸಿರಾಜ್​ ಈ ಪ್ರವಾಸದಲ್ಲೇ ಶ್ರೇಷ್ಠ ಆಟಗಾರನಾಗಿದ್ದಾರೆ. ಮೊದಲ ಸರಣಿಯಲ್ಲೇ ತಂಡದ ಬೌಲಿಂಗ್ ವಿಭಾಗದ ನಾಯಕನಾಗಿದ್ದಲ್ಲದೆ, ತಮ್ಮಂತೆಯೇ ಅನುಭವಿಗಳಲ್ಲದವರನ್ನ ಮುಂದೆ ನಿಂತು ನಡೆಸಿದ್ದಾರೆ.

ಈ ಪ್ರವಾಸದಲ್ಲಿ ಹೊಸ ಆಟಗಾರನಾಗಿ ಬಂದು ಭಾರತ ತಂಡಕ್ಕಾಗಿ ಈ ರೀತಿಯ ಪ್ರದರ್ಶನ ತೋರಿರುವ ನೆನಪು ದೀರ್ಘಕಾಲ ಉಳಿಯಲಿದೆ. ಖಂಡಿತ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಭಾರತ ಸಮರ್ಥ ತಂಡವಾಗಿದೆ " ಎಂದು ಸೆಹ್ವಾಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಿರಾಜ್​ ಮೊದಲ ಪಂದ್ಯದಲ್ಲಿ 5, 2ನೇ ಪಂದ್ಯದಲ್ಲಿ 2 ಹಾಗೂ ಕೊನೆಯ ಪಂದ್ಯದಲ್ಲಿ 6 ವಿಕೆಟ್​ ಪಡೆದಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಕಮಿನ್ಸ್​ 15 ವಿಕೆಟ್​ ಪಡೆದು ಅಗ್ರಸ್ಥಾನದಲ್ಲಿದ್ರೆ, ಸಿರಾಜ್​ 13 ವಿಕೆಟ್​ ಪಡೆದು 2ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ನೋವು, ನಿಂದನೆ, ಅವಮಾನ ಮೆಟ್ಟಿ ನಿಂತ ಸಿರಾಜ್: ಪ್ರಸಕ್ತ ಸರಣಿಯಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ

Last Updated : Jan 18, 2021, 5:40 PM IST

ABOUT THE AUTHOR

...view details