ಕರ್ನಾಟಕ

karnataka

By

Published : Aug 18, 2019, 1:04 PM IST

ETV Bharat / sports

ಧಿಮುತ್ ಕರುಣಾರತ್ನೆ ಶತಕದಾಟ, ಕಿವೀಸ್​ಗೆ 6 ವಿಕೆಟ್​​ಗಳ ಸೋಲು

ಜವಾಬ್ದಾರಿಯುತ ಆಟವಾಡಿ ಶತಕ ಸಿಡಿಸಿದ ನಾಯಕ ಧಿಮುತ್ ಕರುಣಾರತ್ನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲಂಕಾ ಹಾಗೂ ಕಿವೀಸ್ ನಡುವಿನ ಮುಂದಿನ ಟೆಸ್ಟ್ ಪಂದ್ಯ ಆಗಸ್ಟ್ 22ರಂದು ಕೊಲಂಬೋದಲ್ಲಿ ನಡೆಯಲಿದೆ.

ಧಿಮುತ್ ಕರುಣಾರತ್ನೆ

ಗಾಲೆ:ಟೆಸ್ಟ್​ ಕ್ರಿಕೆಟ್​ನಲ್ಲಿ ಎರಡನೇ ಶ್ರೇಯಾಂಕದಲ್ಲಿರುವ ನ್ಯೂಜಿಲ್ಯಾಂಡ್​ ತಂಡವನ್ನು ಆತಿಥೇಯ ಶ್ರೀಲಂಕಾ ಆರು ವಿಕೆಟ್​ಗಳಿಂದ ಮಣಿಸುವ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಗೆಲ್ಲಲು 268 ರನ್​ಗಳ ಗುರಿಯನ್ನು ಪಡೆದಿದ್ದ ಶ್ರೀಲಂಕಾ ತಂಡಕ್ಕೆ ನಾಯಕ ಅದ್ಭುತ ಆರಂಭ ನೀಡಿದರು. ಆಕರ್ಷಕ ಶತಕ ಸಿಡಿಸಿ ಕಪ್ತಾನ ಧಿಮುತ್ ಕರುಣಾರತ್ನೆಗೆ (122) ಮತ್ತೋರ್ವ ಓಪನರ್​​ ಲಹಿರು ತಿರಿಮನ್ನೆ(64) ಉತ್ತಮ ಸಾಥ್ ನೀಡಿದರು.

ಈ ಇಬ್ಬರೂ ಆರಂಭಿಕರು ಔಟಾಗುವ ವೇಳೆ ತಂಡ ಗೆಲುವಿನ ಸನಿಹ ತಲುಪಿತ್ತು. ಕೊನೆಯಲ್ಲಿ ಆ್ಯಂಜೆಲೋ ಮ್ಯಾಥ್ಯೂಸ್(28) ಹಾಗೂ ಕುಸಾಲ್ ಪೆರೇರಾ(23) ಕಾಣಿಕೆ ತಂಡಕ್ಕೆ ಅರ್ಹ ಗೆಲುವು ನೀಡಿತು.

ಜವಾಬ್ದಾರಿಯುತ ಆಟವಾಡಿ ಶತಕ ಸಿಡಿಸಿದ ನಾಯಕ ಧಿಮುತ್ ಕರುಣಾರತ್ನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಲಂಕಾ ಹಾಗೂ ಕಿವೀಸ್ ನಡುವಿನ ಮುಂದಿನ ಟೆಸ್ಟ್ ಪಂದ್ಯ ಆಗಸ್ಟ್ 22ರಂದು ಕೊಲಂಬೋದಲ್ಲಿ ನಡೆಯಲಿದೆ.

ABOUT THE AUTHOR

...view details