ಕರ್ನಾಟಕ

karnataka

By

Published : Sep 22, 2020, 11:31 PM IST

ETV Bharat / sports

ಸಾಮ್ಸನ್​ ಅತ್ಯುತ್ತಮ ಯುವ ಬ್ಯಾಟ್ಸ್​ಮನ್​: ವಾದ ಮಾಡಲು ನಾನು ಸಿದ್ಧ ಎಂದ ಗಂಭೀರ್​

ರಾಯಲ್ಸ್​ 11ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಸಂಜು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟಾರೆ 32 ಎಸೆತಗಳಲ್ಲಿ 9 ಸಿಕ್ಸರ್​ ಹಾಗೂ 1 ಬೌಂಡರಿ ಸಹಿತ 74 ರನ್​ಗಳಿಸಿ 12ನೇ ಓವರ್​ರನಲ್ಲಿ ಎಂಗಿಡಿಗೆ ವಿಕೆಟ್​ ಒಪ್ಪಿಸಿದರು.

ಸಂಜು ಸಾಮ್ಸನ್​
ಸಂಜು ಸಾಮ್ಸನ್​

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ಮಂಗಳವಾರ ಸಿಎಸ್​ಕೆ ವಿರುದ್ಧ ಸಂಜು ಸಾಮ್ಸನ್​ ಸ್ಫೋಟಕ ಬ್ಯಾಟಿಂಗ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಜು ಪ್ರಸ್ತುತ ಭಾರತದ ಅತ್ಯುತ್ತಮ ಯುವ ಬ್ಯಾಟ್ಸ್​ಮನ್​ ಎಂದು ಬಣ್ಣಿಸಿದ್ದಾರೆ.

ರಾಯಲ್ಸ್​ 11ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಸಂಜು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟಾರೆ 32 ಎಸೆತಗಳಲ್ಲಿ 9 ಸಿಕ್ಸರ್​ ಹಾಗೂ 1 ಬೌಂಡರಿ ಸಹಿತ 74 ರನ್​ಗಳಿಸಿ 12ನೇ ಓವರ್​ರನಲ್ಲಿ ಎಂಗಿಡಿಗೆ ವಿಕೆಟ್​ ಒಪ್ಪಿಸಿದರು.

ಸಂಜು ಅವರನ್ನು ಕಳೆದ ಎರಡು ವರ್ಷಗಳಿಂದ ಬೆಂಬಲಿಸುತ್ತಾ ಬಂದಿರುವ ಗೌತಮ್​ ಗಂಭೀರ್​, ಸಂಜು ಸಾಮ್ಸನ್​ ಕೇವಲ ಬೆಸ್ಟ್​ ವಿಕೆಟ್​ ಕೀಪರ್​ ಮಾತ್ರವಲ್ಲ, ಪ್ರಸ್ತುತ ಯುವ ಬ್ಯಾಟ್ಸ್​ಮನ್​ಗಳಲ್ಲಿ ಅತ್ಯುತ್ತಮರಾಗಿದ್ದಾರೆ ಎಂದಿದ್ದಾರೆ.

" ಸಂಜು ಸಾಮ್ಸನ್​ ಕೇವಲ ಭಾರತದ ಅತ್ಯುತ್ತಮ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಮಾತ್ರವಲ್ಲ, ಅವರು ಭಾರತದ ಅತ್ಯುತ್ತಮ ಯುವ ಬ್ಯಾಟ್ಸ್​ಮನ್​! ಯಾರಾದರೂ ನನ್ನ ಜೊತೆ ವಾದ ಮಾಡುತ್ತೀರಾ? "ಎಂದು ಸಂಜುವನ್ನು ಕೊಂಡಾಡಿದ್ದಾರೆ.

ಸಂಜು ಸಾಮ್ಸನ್​ ಹೊರತು ಪಡಿಸಿದರೆ ನಾಯಕ ಸ್ಟಿವ್ ಸ್ಮಿತ್​ ಕೂಡ 69 ರನ್​ ಸಿಡಿಸಿದರು. ಜೊತೆಗೆ ಕೊನೆಯಲ್ಲಿ ಆರ್ಚರ್​ 8 ಎಸೆತಗಳಲ್ಲಿ 27 ರನ್​ ಸಿಡಿಸಿ ತಂಡದ ಮೊತ್ತವನ್ನು216ಕ್ಕೆ ಏರಿಸಿದ್ದರು.

ABOUT THE AUTHOR

...view details