ಕರ್ನಾಟಕ

karnataka

By

Published : Jan 19, 2021, 1:57 PM IST

Updated : Jan 19, 2021, 2:04 PM IST

ETV Bharat / sports

ಟೀಂ ಇಂಡಿಯಾ ಸಂಘಟಿತ ಹೋರಾಟಕ್ಕೆ ಬಿಸಿಸಿಐ ಬಹುಪರಾಕ್​​: 5 ಕೋಟಿ ಬೋನಸ್​

ಬಾರ್ಡರ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಬೋನಸ್​ ಆಗಿ 5 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ.

BCCI
ಬಿಸಿಸಿಐ

ಬ್ರಿಸ್ಬೇನ್​: ಬಾರ್ಡರ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. 328 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಟೀಮ್​ ಇಂಡಿಯಾ 7 ವಿಕೆಟ್​ ಕಳೆದುಕೊಂಡು ಗೆಲುವಿನ ದಡ ಸೇರಿದೆ.

31 ವರ್ಷಗಳಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುತ್ತಿರುವುದು ಇದೇ ಮೊದಲು. ಈ ಗೆಲುವು ಖಂಡಿತವಾಗಿಯೂ ಐತಿಹಾಸಿಕವಾದುದು ಎಂದು ಉಲ್ಲೇಖಿಸಲಾಗಿದೆ. ಇನ್ನು ಈ ಸಂತಸದ ವಿಚಾರದಲ್ಲಿ ಬಿಸಿಸಿಐ ಟೀಂ ಇಂಡಿಯಾಗೆ ಬೋನಸ್​ ಆಗಿ 5 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ.

ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಬಿಸಿಸಿಐ, "ಬೋನಸ್ ಆಗಿ 5 ಕೋಟಿ ರೂ. ಭಾರತ ಕ್ರಿಕೆಟ್‌ ತಂಡಕ್ಕೆ ನೀಡಲಾಗುತ್ತಿದೆ. ಭಾರತದ ಈ ಗೆಲುವು ವಿಶೇಷ ಕ್ಷಣಗಳನ್ನು ಸೃಷ್ಟಿ ಮಾಡಿದೆ‘‘ ಎಂದು ಸಂತಸ ವ್ಯಕ್ತಪಡಿಸಿದೆ.

Last Updated : Jan 19, 2021, 2:04 PM IST

ABOUT THE AUTHOR

...view details