ಕರ್ನಾಟಕ

karnataka

By

Published : Feb 21, 2019, 1:45 PM IST

ETV Bharat / sports

ವಿಶ್ವಕಪ್​ನಿಂದ ಪಾಕ್​ ಬ್ಯಾನ್ ಮಾಡಿ ಇಲ್ಲವೇ ಟೂರ್ನಿಯಿಂದಲೇ ಭಾರತ ಔಟ್​..! ಕುತೂಹಲ ಘಟ್ಟದಲ್ಲಿ ಬಿಸಿಸಿಐ ನಡೆ

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಈ ಪತ್ರ ತಯಾರಿಸಿದ್ದು,  ಇದನ್ನು ನಿರ್ವಾಹಕ ಸಮಿತಿ ಚೇರ್ಮನ್ ವಿನೋದ್ ರೈ ಅಂಗೀಕರಿಸಿದ್ದಾರೆ. ಬಿಸಿಸಿಐ ಈ ಸಂಬಂಧ ತನ್ನ ಅಂತಿಮ ನಿರ್ಧಾರ ಇಂದು ಕೈಗೊಳ್ಳಲಿದೆ.

ಬಿಸಿಸಿಐ

ಮುಂಬೈ: ಪುಲ್ವಾಮಾ ಉಗ್ರದಾಳಿಯ ಹಿನ್ನೆಲೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

ಸುಪ್ರೀಂಕೋರ್ಟ್​ ನೇಮಕ ಮಾಡಿರುವ ನಿರ್ವಾಹಕ ಸಮಿತಿ (ಸಿಎಒ) ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್​​ಗೆ ಪತ್ರದ ಕರಡು ಪ್ರತಿ ತಯಾರಿಸಿದ್ದು, ವಿಶ್ವಕಪ್​ನಿಂದ ಪಾಕಿಸ್ತಾನವನ್ನು ಬ್ಯಾನ್ ಮಾಡಬೇಕು ಇಲ್ಲವಾದಲ್ಲಿ ಭಾರತ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡಿದೆ ಎಂಬ ಅಂಶವನ್ನ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್​ ಭಾರತ ವಿಶ್ವಕಪ್​ನಲ್ಲಿ ಪಾಕ್ ಜೊತೆಗೆ ಆಡಬಾರದು ಎಂದು ಖಡಕ್ಕಾಗೇ ಹೇಳಿದ್ದಾರೆ.

ABOUT THE AUTHOR

...view details