ದಾದಾಗೆ ಕಾಡಿದ ಎದೆ ನೋವು.. ಡೋಂಟ್ವರಿ ಇಂದೇ ಬಿಡುಗಡೆಯಾಗಲಿದ್ದಾರೆ ಗಂಗೂಲಿ - ಸೌರವ್ ಗಂಗೂಲಿ ಸುದ್ದಿ
![ದಾದಾಗೆ ಕಾಡಿದ ಎದೆ ನೋವು.. ಡೋಂಟ್ವರಿ ಇಂದೇ ಬಿಡುಗಡೆಯಾಗಲಿದ್ದಾರೆ ಗಂಗೂಲಿ Sourav Ganguly is hospitalized, BCCI Chief Sourav Ganguly is hospitalized, BCCI Chief Sourav Ganguly news, ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ, ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸೌರವ್ ಗಂಗೂಲಿ ಸುದ್ದಿ,](https://etvbharatimages.akamaized.net/etvbharat/prod-images/768-512-10091677-1056-10091677-1609576898493.jpg)
13:52 January 02
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲ್ಕತ್ತಾ:ಇಂದು ಬೆಳಗ್ಗೆ ಗಂಗೂಲಿ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದು ಬೆಳಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗೂಲಿಯನ್ನು ಕೋಲ್ಕತ್ತಾದ ವುಡ್ಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಜಿಯೋಪ್ಲ್ಯಾಸ್ಟಿ ಮಾಡಿದ ನಂತರ ಭಾರತದ ಮಾಜಿ ನಾಯಕನನ್ನು ಇಂದೇ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇನ್ನು ಈ ಘಟನೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ ಗಂಗೂಲಿ ಅವರಿಗೆ ಹೃದಾಘಾತ ಸಂಭವಿಸಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಆಶೀಸುತ್ತೇನೆ ಅಂತಾ ಟ್ವೀಟ್ ಮಾಡಿದ್ದಾರೆ.