ಕರ್ನಾಟಕ

karnataka

ETV Bharat / sports

ಕೊರೊನಾ ಪರೀಕ್ಷಾ ಕೇಂದ್ರ, ನಿರಾಶ್ರಿತರ ಕೇಂದ್ರವಾದ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂ

ಬೆಂಗಳೂರು, ದೆಹಲಿ, ಮುಂಬೈ ನಂತಹ ಬೃಹತ್​ ನಗರಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲು ಈಗಾಗಲೆ ಸರ್ಕಾರಿ ಕಚೇರಿಗಳು, ಮದುವೆ ಛತ್ರಗಳು, ಶಾಲಾ ಕಾಲೇಜುಗಳು,ಲಾಡ್ಜ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಕ್ರಿಕೆಟ್​ ಸ್ಟೇಡಿಯಂಗಳು ಸೇರಿವೆ.

By

Published : May 20, 2020, 2:43 PM IST

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂ
ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂ

ನವದೆಹಲಿ: ದೇಶದಲ್ಲಿ ದಿನಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೆ ದಿನಕ್ಕೆ ಮೂರರಿಂದ ನಾಲ್ಕೂ ಸಾವಿರ ಹೊಸ ಸೋಂಕಿತರ ಹೆಚ್ಚಾಗುತ್ತಿದ್ದಾರೆ.

ಬೆಂಗಳೂರು, ಮುಂಬೈ ನಂತಹ ಬೃಹತ್​ ನಗರಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲು ಈಗಾಗಲೆ ಸರ್ಕಾರಿ ಕಚೇರಿಗಳು, ಮದುವೆ ಛತ್ರಗಳು, ಶಾಲಾ ಕಾಲೇಜುಗಳು,ಲಾಡ್ಜ್​ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಕ್ರಿಕೆಟ್​ ಸ್ಟೇಡಿಯಂಗಳು ಸೇರಿವೆ.

ಇತ್ತೀಚೆಗಷ್ಟೆ ಮುಂಬೈನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೆ ಪ್ರಸ್ತಿದ್ಧ ವಾಂಖೆಡೆ ಕ್ರೀಡಾಂಗಣವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬೃಹತ್ ಮುಂಬೈ ನಗರಪಾಲಿಕೆ ಅಲ್ಲಿ ಪರೀಕ್ಷಾ ಕೇಂದ್ರವಾಗಿ, ಸೋಂಕಿನ ಗುಣಲಕ್ಷಣಗಳುಳ್ಳವರಿಗೆ ಕ್ವಾರಂಟೈನ್​ ಕೇಂದ್ರವಾಗಿ ಬಳಸಿಕೊಳ್ಳುತ್ತಿದೆ.

ಇದೀಗ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಕೂಡ ಕೋವಿಡ್-19 ಸೆಂಟರ್ ಆಗಿ ಬದಲಾಗಿದೆ. ಕ್ರೀಡಾಂಗಣದ ಆವರಣದಲ್ಲಿ ತವರಿಗೆ ಮರಳಲು ಸಿದ್ದರಾಗಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ವಲಸೆ ಕಾರ್ಮಿಕರನ್ನು ಪರೀಕ್ಷಿಸಲು ಬಳಸಲಾಗುತ್ತಿದೆ.

ಈಗಾಗಲೆ ನಾಲ್ಕನೇ ಲಾಕ್​ಡೌನ್​ನಲ್ಲಿ ಕಾರ್ಮಿಕರನ್ನು ಬಸ್ಸು ಮತ್ತು ರೈಲುಗಳ ಮೂಲಕ ಅವರ ತವರಿಗೆ ತಲುಪಿಸು ಕಾರ್ಯಕ್ಕೆ ಪ್ರಮುಖ ರಾಜ್ಯಗಳ ಸರ್ಕಾರಗಳು ಮುಂದಾಗಿದೆ. ಹಾಗೆಯೇ ದೆಹಲಿ ಸರ್ಕಾರ ಕೂಡ ಈ ಕಾರ್ಯಕ್ಕೆ ಮುಂದಾಗಿದೆ.

ABOUT THE AUTHOR

...view details