ಕರ್ನಾಟಕ

karnataka

ದುಲೀಪ್​ ಟ್ರೋಫಿ: ಗ್ರೀನ್​​​​ ಮಣಿಸಿ ಚಾಂಪಿಯನ್​​​​​​ ಆದ ಇಂಡಿಯಾ ರೆಡ್​​​

By

Published : Sep 7, 2019, 7:31 PM IST

ಅಕ್ಷಯ್​ ವಾಖರೆ ಅವರ ಅದ್ಭುತ ಬೌಲಿಂಗ್​ ಪ್ರದರ್ಶನದ ನೆರವಿನಿಂದ 2019ನೇ ಸಾಲಿನ ದುಲೀಪ್​ ಟ್ರೋಫಿಯನ್ನು ಇಂಡಿಯಾ ರೆಡ್​ ತಂಡ ಎತ್ತಿ ಹಿಡಿದಿದೆ.

Duleep Trophy

ಬೆಂಗಳೂರು:2019ರ ದುಲೀಪ್​ ಟ್ರೋಫಿಯಲ್ಲಿ ಪ್ರಿಯಾಂಕ್​ ಪಾಂಚಾಲ್​ ನೇತೃತ್ವದ ಇಂಡಿಯಾ ರೆಡ್​ ತಂಡ ಇನ್ನಿಂಗ್ಸ್​ ಹಾಗೂ 38 ರನ್​ಗಳಿಂದ ಗ್ರೀನ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಗ್ರೀನ್​ ತಂಡ 231 ರನ್​ಗಳಿಗೆ ಆಲ್​​ಔಟ್​ ಆಗಿತ್ತು. ಇದಕ್ಕುತ್ತರವಾಗಿ ರೆಡ್ ತಂಡದ ಅಭಿಮನ್ಯು ಈಶ್ವರನ್​​(153) ಅವರ ಶತಕದ ನೆರವಿನಿಂದ​ 388 ರನ್​ಗಳಿಸಿ 157 ರನ್​ಗಳ ಮುನ್ನಡೆ ಸಾಧಿಸಿತ್ತು.

ಕರುಣ್​ ನಾಯರ್​

157 ರನ್​ಗಳ ಹಿನ್ನಡೆಯನುಭವಿಸಿದ ಗ್ರೀನ್​ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 119 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇನ್ನಿಂಗ್ಸ್​ ಹಾಗೂ 38 ರನ್​ಗಳಿಂದ ಸೋಲನುಭವಿಸಿತು.

ರೆಡ್​ ತಂಡದ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಅಕ್ಷಯ್​ ವಾಖರೆ 5 ವಿಕೆಟ್​, ಆವೇಶ್​ ಖಾನ್​ 3 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ABOUT THE AUTHOR

...view details