ಕರ್ನಾಟಕ

karnataka

ETV Bharat / sports

ಲೆಜೆಂಡ್​ ಗಿಲ್​ಕ್ರಿಸ್ಟ್​​ ಎದುರಿಸಿದ ವೃತ್ತಿ ಜೀವನದ ಅತ್ಯಂತ ಕಠಿಣ ಬೌಲರ್​ ಭಾರತದ ಸ್ಪಿನ್ನರ್?​ - ಹರ್ಭಜನ್​ ಗಿಲ್​ಕ್ರಿಸ್ಟ್​​ ಎದುರಿಸಿದ ಕಠಿಣ ಬೌಲರ್

ತಮ್ಮ ದಶಕಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಶ್ರೀಲಂಕಾದ ಸ್ಪಿನ್​ ಲೆಜೆಂಡ್ ಮುತ್ತಯ್ಯ ಮುರುಳೀದರನ್​ ಅವರ ಬೌಲಿಂಗ್​ ಎದುರಿಸುವುದು ಅತ್ಯಂತ ಕಠಿಣವಾಗಿತ್ತು ಎಂದು ಗಿಲ್ಲಿ ಬಹಿರಂಗ ಪಡಿಸಿದ್ದಾರೆ.

Adam Gilchrist Reveals

By

Published : Nov 13, 2019, 6:59 PM IST

ನವದೆಹಲಿ: ವಿಶ್ವಕ್ರಿಕೆಟ್​ ಕಂಡಂತಹ ಸ್ಫೋಟಕ ಬ್ಯಾಟ್ಸ್​ಮನ್​ ಆಸೀಸ್​ ಮಾಜಿ ವಿಕೆಟ್​ ಕೀಪರ್​ ಆ್ಯಂಡಂ ಗಿಲ್​ಕ್ರಿಸ್ಟ್​ ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್​ ಭಾರತದ ಸ್ಪಿನ್ನರ್​ ಹರ್ಭಜನ್​ ಸಿಂಗ್ ಎಂದು ಬಹಿರಂಗ ಪಡಿಸಿದ್ದಾರೆ.

ತಮ್ಮ ದಶಕಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಆಫ್-ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಶ್ರೀಲಂಕಾದ ಸ್ಪಿನ್​ ಲೆಜೆಂಡ್ ಮುತ್ತಯ್ಯ ಮುರುಳೀದರನ್​ ಅವರ ಬೌಲಿಂಗ್​ ಎದುರಿಸುವುದು ಅತ್ಯಂತ ಕಠಿಣವಾಗಿತ್ತು ಎಂದು ಗಿಲ್ಲಿ ಬಹಿರಂಗ ಪಡಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ನೊಂದಿಗೆ ತಮ್ಮ ಈ ವಿಚಾರವನ್ನು ಹಂಚಿಕೊಂಡಿದ್ದು 2001ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಜ್ಜಿ ಬೌಲಿಂಗ್​ಗೆ ತಿಣುಕಾಡಿದ್ದ ಬಗ್ಗೆ ಮೆಲುಕು ಹಾಕಿದ್ದಾರೆ.

ಹರ್ಭಜನ್​ ಸಿಂಗ್​
2001ರಲ್ಲಿ ಸ್ವಿವ್​ ವಾ ಅವರ ನಾಯಕತ್ವದಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದೆವು. ನಮ್ಮ ತಂಡ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು 176 ರನ್​ಗಳಿಗೆ ಆಲೌಟ್​ ಮಾಡಿದೆವು. ಮೊದಲ ಇನ್ನಿಂಗ್ಸ್​ ಆರಂಭಿಸಿದ ನಮ್ಮ ತಂಡ ಕೇವಲ 99 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ನಾನು 80 ಎಸೆತಗಳಿಗೆ ಶತಕ ಸಿಡಿಸಿದೆ. ಆ ಪಂದ್ಯವನ್ನು ನಾವು ಮೂರೇ ದಿನಗಳಲ್ಲಿ ಗೆದ್ದುಕೊಂಡಿದ್ದೆವು.

ಇದೇ ರೀತಿ ಮುಂದಿನ ಪಂದ್ಯಗಳನ್ನು ಗೆಲ್ಲಬುಹುದು ಎಂದು ಚಿಂತಿಸಿದ್ದೆವು. ಆದರ ನಮ್ಮ ಆಲೋಚನೆ ತಲೆಕೆಳಗಾಗಿ ಮಾಡಿದವರು ಅಂದಿನ ಯುವ ಬೌಲರ್​ ಹರ್ಭಜನ್​ ಸಿಂಗ್​. ಮುಂದಿನ ಪಂದ್ಯಗಳಲ್ಲಿ ಹರ್ಭಜನ್​ ನಮ್ಮ ತಂಡವನ್ನು ಕಾಡತೊಡಗಿದರು. ಅಂದಿನಿಂದ ಟೆಸ್ಟ್​ನಲ್ಲಿ ಆಕ್ರಮಣ ಆಟ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ನನ್ನ ಅರಿವಿಗೆ ಬಂತು ಎಂದು ಅವರು 2001 ರ ಬಾರ್ಡರ್​ ಗವಾಸ್ಕರ್​ ಸರಣಿ ಸೋಲಿನ ಕುರಿತು ವಿವರಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಗಿಲ್ಲಿ ನಂತರ 2 ನೇ ಟೆಸ್ಟ್​ನಲ್ಲಿ ಕಿಂಗ್​ಪೈರ್​(ಎರಡೂ ಇನ್ನಿಂಗ್ಸ್​ನಲ್ಲೂ ಗೋಲ್ಡನ್​ ಡಕ್​) ಸಂಪಾದಿಸಿದ್ದರು. ಕೊನೆಯ ಟೆಸ್ಟ್​ನಲ್ಲಿ ಎರಡೂ ಇನ್ನಿಂಗ್ಸ್​ನಲ್ಲಿ ಸಿಂಗಲ್​ ರನ್​ಗೆ ವಿಕೆಟ್​ ಒಪ್ಪಿಸಿದ್ದರು. ಅಂದು ಆಸ್ಟ್ರೇಲಿಯಾವನ್ನು ಧೂಳಿಪಟ ಮಾಡಿದ್ದ ಯುವ ಬೌಲರ್​ ಹರ್ರಭಜನ್​ ಸಿಂಗ್​. ಭಜ್ಜಿ ಆ ಸರಣಿಯಲ್ಲಿ 32 ವಿಕೆಟ್​ ಪಡೆದು ಆಸ್ಟ್ರೇಲಿಯನ್ನರ ಸತತ 16ಟೆಸ್ಟ್​ಗಳ ವಿಜಯಕ್ಕೆ ಬ್ರೇಕ್​ ಹಾಕಿದರಲ್ಲದೆ ಸರಣಿಯನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದರು.

ABOUT THE AUTHOR

...view details