ಕರ್ನಾಟಕ

karnataka

ETV Bharat / sports

5ನೇ ಟೆಸ್ಟ್​​ ಪಂದ್ಯ ರದ್ದು: ಮರು ವೇಳಾಪಟ್ಟಿಗೆ ಇಂಗ್ಲೆಂಡ್​ ಜೊತೆ ಬಿಸಿಸಿಐ ಬಿಸಿ ಬಿಸಿ ಚರ್ಚೆ - ಮ್ಯಾಂಚೆಸ್ಟರ್​ ಪಂದ್ಯ

ಕೋವಿಡ್​ನಿಂದಾಗಿ ಭಾರತ-ಇಂಗ್ಲೆಂಡ್ ನಡುವಣ ಫೈನಲ್​ ಟೆಸ್ಟ್​ ಪಂದ್ಯ ರದ್ಧುಗೊಂಡಿದೆ. ಈ ಪಂದ್ಯದ ವೇಳಾಪಟ್ಟಿಯನ್ನು ಮರುನಿಗದಿ ಮಾಡಲು ಇದೀಗ ಇಸಿಬಿ-ಬಿಸಿಸಿಐ ನಡುವೆ ಮಾತುಕತೆ ನಡೆಯುತ್ತಿದೆ.

BCCI
BCCI

By

Published : Sep 10, 2021, 4:08 PM IST

ಮ್ಯಾಂಚೆಸ್ಟರ್​​:ಪ್ರವಾಸಿ ಭಾರತ-ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ 5ನೇ ಟೆಸ್ಟ್​​ ಪಂದ್ಯ ಕೋವಿಡ್​ನಿಂದಾಗಿ ರದ್ಧುಗೊಂಡಿದೆ. ಫೈನಲ್​​​ ಪಂದ್ಯ ಯಾವಾಗ ನಡೆಸಬೇಕು ಎಂಬುದರ ಕುರಿತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಜೊತೆ ಸೇರಿ ಸಮಾಲೋಚನೆಯಲ್ಲಿ ತೊಡಗಿರುವ ಬಿಸಿಸಿಐ, ಪಂದ್ಯದ ಮರು ವೇಳಾಪಟ್ಟಿ ನಿಗದಿ ಮಾಡಲು ತಯಾರಿ ನಡೆಸುತ್ತಿದೆ.

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೋವಿಡ್​ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆ ಫೈನಲ್​ ಪಂದ್ಯವನ್ನು ಮುಂದೂಡಿಕೆ ಅಥವಾ ಅಮಾನತು ಮಾಡುವಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಬಳಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್ ಮನವಿ ಮಾಡಿಕೊಂಡಿತ್ತು. ಆದರೆ ಇದಕ್ಕೆ ಬಿಸಿಸಿಐ ಹಿಂದೇಟು ಹಾಕಿ, ಅಗತ್ಯಬಿದ್ದರೆ ಪಂದ್ಯ ರದ್ಧುಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಪಂದ್ಯ ಇದೀಗ ರದ್ದು ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಸಿಸಿಐ, ಫೈನಲ್​ ಪಂದ್ಯದ ವೇಳಾಪಟ್ಟಿ ಮರು ನಿಗದಿ ಮಾಡುವಂತೆ ನಾವು ಇಸಿಬಿ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎರಡು ಮಂಡಳಿಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದೆ.

ಇದನ್ನೂ ಓದಿ: ಸ್ನಾನ ಮಾಡಿ ಗಣೇಶ ಪೂಜೆಗೆ ಹೂ ತರಲು ಅಣೆಕಟ್ಟೆ ನೀರಿಗಿಳಿದ ಮೂವರು ಬಾಲಕಿಯರ ದುರ್ಮರಣ

ಟೀಂ ಇಂಡಿಯಾದ ಜೂನಿಯರ್ ಫಿಜಿಯೋ ಯೋಗೇಶ್​ ಪರ್ಮಾರ್​ಗೆ ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಎಲ್ಲ ಪ್ಲೇಯರ್ಸ್​ಗೆ ಕೊರೊನಾ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಲಾಗಿತ್ತು. ಎಲ್ಲರ ವರದಿ ನೆಗೆಟಿವ್​​ ಬಂದಿದೆ. ಆದರೂ ಟೀಂ ಇಂಡಿಯಾ ಕ್ಯಾಂಪ್​​ನಲ್ಲಿ ಕೋವಿಡ್​ ಸೋಂಕಿತ ಪ್ರಕರಣ ಮತ್ತಷ್ಟು ಹೆಚ್ಚಾಗುವ ಭೀತಿ ಇರುವ ಕಾರಣ ಇಂದಿನಿಂದ ಆರಂಭಗೊಳ್ಳಬೇಕಾಗಿದ್ದ ಪಂದ್ಯ ಮುಂದೂಡಿಕೆ ಮಾಡಲಾಗಿದೆ.

ಈಗಾಗಲೇ ಟೀಂ ಇಂಡಿಯಾದ ಕೋಚ್​ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋ ನಿತಿನ್ ಪಟೇಲ್ ಅವರಿಗೆ ಕೊರೊನಾ ದೃಢಗೊಂಡಿದ್ದು, 10 ದಿನಗಳ ಕಾಲ ಕ್ವಾರಂಟೈನ್​ಗೊಳಗಾಗಿದ್ದಾರೆ.

ABOUT THE AUTHOR

...view details