ಕರ್ನಾಟಕ

karnataka

ETV Bharat / sports

India vs West Indies: ಟಿ 20 ತಂಡಕ್ಕೆ ಆಯ್ಕೆ ಆಗದ ರಾಣಾ.. ಗ್ರಹಣದ ಸ್ಟೋರಿ ಹಾಕಿ ಬೇಸರ ವ್ಯಕ್ತ ಪಡಿಸಿದ ಬ್ಯಾಟರ್​​ - ETV Bharath Kannada news

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಯುವ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಸೆಲೆಕ್ಟ್​​ ಮಾಡಿದೆ. ಆದರೆ ಅದರಲ್ಲಿ ಕೆಕೆಆರ್​ ನಾಯಕ ನಿತೀಶ್​ ರಾಣಾಗೆ ಸ್ಥಾನ ಸಿಕ್ಕಿಲ್ಲ.

Bad days build better days Nitish Rana shares cryptic post
Bad days build better days Nitish Rana shares cryptic post

By

Published : Jul 7, 2023, 8:11 PM IST

ವೆಸ್ಟ್​ ಇಂಡೀಸ್​ ಪ್ರವಾಸದ ಟಿ20 ಪಂದ್ಯಕ್ಕಿ ಜುಲೈ 3 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತಂಡವನ್ನು ಪ್ರಕಟಿಸಿದೆ. 2007 ರಲ್ಲಿ ಧೋನಿ ಕೈಗೆ ಟಿ20 ನಾಯಕತ್ವವನ್ನು ಕೊಟ್ಟು ಹೊಸ ತಂಡ ರಚಿಸಿದಂತೆ ಈ ಬಾರಿ ನಿರ್ಧಾರ ಮಾಡಲಾಗಿದೆ. ಅನುಭವಿಗಳಿಗ ರೆಸ್ಟ್ ಅಥವಾ ಇನ್ನು ಮುಂದೆ ಟಿ20, ಏಕದಿನ ಮತ್ತು ಟೆಸ್ಟ್​ಗೆ ಬೇರೆ ಬೇರೆ ತಂಡವನ್ನು ಮಾಡುತ್ತಾರಾ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ.

ಪ್ರಕಟಿತ ತಂಡದಲ್ಲಿ ವಿರಾಟ್​​ ಕೊಹ್ಲಿ ಮತ್ತು ರೋಹಿತ್​ ಶರ್ಮಾಗೆ ಅವಕಾಶ ನೀಡಲಾಗಿಲ್ಲ. ಬಹಳ ಸಮಯದಿಂದ ಟೀಮ್​ ಇಂಡಿಯಾದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಕ್ಕಿದೆ. ಟಿ 20 ಅಗ್ರ ಶ್ರೇಯಾಂಕದ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ಗೆ ಉಪನಾಯಕನ ಪಟ್ಟವನ್ನು ಕಟ್ಟಲಾಗಿದ್ದು, ಗುಜರಾತ್​ ಟೈಟಾನ್ಸ್​ನ ಯಶಸ್ವಿ ನಾಯಕ ಹಾರ್ದಿಕ್​ ಪಾಂಡ್ಯಗೆ ಟಿ20 ನಾಯಕತ್ವ ಮುಂದುವರೆಸಲಾಗಿದೆ.

2023ರ ಐಪಿಎಲ್​ ಜೊತೆಗೆ ದೇಶೀಯ ತಂಡದಲ್ಲಿ ಮಿಂಚಿದ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಮುಖೇಶ್ ಕುಮಾರ್, ರವಿ ಬಿಷ್ಣೋಯ್ ಸೇರಿದಂತೆ ಹಲವು ಶ್ರೇಷ್ಠ ಆಟಗಾರರು ಈ ತಂಡದಲ್ಲಿದ್ದಾರೆ. ಆದರೆ, ಅದ್ಭುತ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಈ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದಲ್ಲಿ ನಿತೀಶ್ ರಾಣಾ 14 ಪಂದ್ಯಗಳಲ್ಲಿ 31.77 ಸರಾಸರಿ ಮತ್ತು 140.96 ಸ್ಟ್ರೈಕ್ ರೇಟ್‌ನಲ್ಲಿ 413 ರನ್ ಗಳಿಸಿದ್ದರು.

ಇನ್​​ಸ್ಟಾಗ್ರಾಮ್​ ಸ್ಟೋರಿ

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾವನ್ನು ಘೋಷಿಸಿದ ತಕ್ಷಣ, ನಿತೀಶ್ ರಾಣಾ ತಮ್ಮ ಅಧಿಕೃತ Instagram ಖಾತೆಯ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿಯನ್ನು ಅವರು ತಂಡಕ್ಕ ಆಯ್ಕೆ ಆಗದಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ. ಐಪಿಎಲ್​ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡುತ್ತಾ ಬಂದರೂ ಅವರಿಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ.

ನಿತೀಶ್ ರಾಣಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಗ್ರಹಣದ ಫೋಟೋವನ್ನು ಹಂಚಿಕೊಂಡು 'ಕೆಟ್ಟ ದಿನಗಳು ಒಳ್ಳೆಯ ದಿನಗಳನ್ನು ಮಾಡುತ್ತವೆ' ಎಂದು ಬರೆದುಕೊಂಡಿದ್ದಾರೆ. ಈ ಸ್ಟೋರಿ ನೋಡಿದರೆ ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯಲ್ಲಿ ಅವಕಾಶ ಸಿಗದಿರುವುದರ ಬಗ್ಗೆ ತಮ್ಮ ಬೆಸರ ವ್ಯಕ್ತಪಡಿಸಿದಂತಿದೆ ಎಂದು ಅವರ ಅಭಿಮಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.

ಭಾರತದ T20I ತಂಡ ಇಲ್ಲಿದೆ: ಇಶಾನ್ ಕಿಶನ್ (ವಿಕೆಟ್​ ಕೀಪರ್​), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​​), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

ಇದನ್ನೂ ಓದಿ:India vs West Indies Test: ಮೊದಲ ಟೆಸ್ಟ್​ನಲ್ಲಿ ಆರಂಭಿಕರಾಗಿ ಆಡಲಿದ್ದಾರೆ ಜೈಸ್ವಾಲ್​.. ಪೂಜಾರ ಜಾಗಕ್ಕೆ ಗಿಲ್​..

ABOUT THE AUTHOR

...view details