ಕರ್ನಾಟಕ

karnataka

ETV Bharat / sitara

'14 ಡೇಸ್​' ಕ್ವಾರಂಟೈನ್​​​ನಲ್ಲಿ ಇದ್ದ ಯತಿರಾಜ್​ ಆ ಕೆಟ್ಟ ನಿರ್ಧಾರ ಮಾಡಿದ್ದೇಕೆ...? - Yethiraj direction 14 days short film

ಸಿನಿಮಾ, ಧಾರಾವಾಹಿ ಚಿತ್ರೀಕರಣ ಮೊದಲಿನಂತೆ ನಡೆಯುತ್ತಿಲ್ಲವಾದರೂ ನಟ, ನಿರ್ದೇಶಕ ಯತಿರಾಜ್ ಮಾತ್ರ ಮನೆಯಲ್ಲಿ ಸುಮ್ಮನೆ ಕೂರದೆ ಕಿರುಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆ. ಇದೀಗ '14 ಡೇಸ್' ಎಂಬ ಕಿರುಚಿತ್ರವನ್ನು ಅವರು ತಯಾರಿಸಿದ್ದಾರೆ.

Yethiraj direction 14 days short film
ಯತಿರಾಜ್​

By

Published : Jul 18, 2020, 10:24 AM IST

ಕೊರೊನಾ ಲಾಕ್​ಡೌನ್ ಸಮಯದಲ್ಲಿ 'ಕೊರೊನಾ ಕಾಣಿಕೆ', 'ಸೌಂಡ್' ಕಿರುಚಿತ್ರಗಳನ್ನು ಮಾಡಿ ಸಮಾಜಕ್ಕೆ ಸಂದೇಶ ನೀಡುತ್ತಿರುವ ನಟ, ನಿರ್ದೇಶಕ ಯತಿರಾಜ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ನಟ, ಬರಹಗಾರ, ನಿರ್ಮಾಪಕ, ನಿರ್ದೇಶಕ ಯತಿರಾಜ್​​ ಇದೀಗ '14 ಡೇಸ್' ಎಂಬ ಕಿರುಚಿತ್ರವನ್ನು ತಯಾರಿಸಿದ್ದು ಕಲಾವಿದ ಅಕಾಡೆಮಿ ಯೂಟ್ಯೂಬ್​​ನಲ್ಲಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಕೊರೊನಾ ವೈರಸ್​ನಿಂದ 14 ದಿನಗಳ ಕಾಲ ಒಬ್ಬರೇ ಮನೆಯಲ್ಲಿ ಅಥವಾ ರೂಂನಲ್ಲಿ ಜೀವಿಸಬೇಕಾದ ಪರಿಸ್ಥಿತಿಯಲ್ಲಿ ಮನಸ್ಸಿನಲ್ಲಿ ಆಗುವ ಅಲ್ಲೋಲ ಕಲ್ಲೋಲಗಳ ಬಗ್ಗೆ ಯತಿರಾಜ್ ಈ ಕಿರುಚಿತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.

ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ 14 ವರ್ಷಗಳ ಕಾಲ ಮಡದಿ ಸೀತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಕಾಡಿಗೆ ಹೋದದ್ದು ಎಲ್ಲರಿಗೂ ತಿಳಿದಿದೆ. ಈ ಕಲಿಯುಗದಲ್ಲಿ 14 ದಿನಗಳ ಕ್ವಾರಂಟೈನ್​​ಲ್ಲಿ ಒಬ್ಬನೇ ಇರಲು ಮನುಷ್ಯ ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ಈ ಕಿರುಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಯತಿರಾಜ್​ ಜೊತೆ ಮಜಾ ಟಾಕೀಸ್ ಖ್ಯಾತಿಯ ಪವನ್ ಕೂಡಾ ಅಭಿನಯಿಸಿದ್ದಾರೆ.

ರೂಮ್​ನಲ್ಲಿ ಕ್ವಾರಂಟೈನ್ ಆಗುವ ವ್ಯಕ್ತಿ ತಲೆಯಲ್ಲಿ ಅನೇಕ ಯೋಚನೆಗಳು ತಿರುಗುತ್ತಿರುತ್ತದೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕೂಡಾ ಮಾಡುತ್ತಾನೆ. ಆದರೆ ಅದೆಲ್ಲವೂ ಕನಸು ಎಂದು ಅರಿವಾಗುತ್ತದೆ. 6:47 ನಿಮಿಷ ಅವಧಿಯ ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣವನ್ನು ಕೂಡಾ ಯತಿರಾಜ್ ಅವರೇ ಮಾಡಿದ್ದಾರೆ.

ABOUT THE AUTHOR

...view details