ಕರ್ನಾಟಕ

karnataka

By

Published : May 24, 2019, 8:40 PM IST

ETV Bharat / sitara

ಈ ವಾರ ವಿಕೇಂಡ್ ವಿಥ್ ರಮೇಶ್ ಪ್ರಸಾರವಾಗುವುದಿಲ್ಲ.. ಯಾಕೆ ಗೊತ್ತಾ?

ತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಮನೆ ಮಂದಿಯೆಲ್ಲ ಟಿವಿ ಮುಂದೆ ಕುಳಿತು ವಿಕೇಂಡ್​ ಟೆಂಟ್​ಲ್ಲಿ ಬರೋ ಸಾಧಕರ ಸಾಹಸಗಾಥೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಈ ವಾರ ವೀಕೆಂಡ್ ವಿಥ್ ರಮೇಶ್​ ಕಾರ್ಯಕ್ರಮಕ್ಕೆ ಕೊಂಚ ಬ್ರೇಕ್​ ಹಾಕಲಾಗಿದೆ.

ಚಿತ್ರಕೃಪೆ : ಝಿ ವಾಹಿನಿ ಇನ್​​ಸ್ಟಾಗ್ರಾಂ

ಬೆಂಗಳೂರು: ಕನ್ನಡಿಗರ ಅಚ್ಚುಮೆಚ್ಚಿನ 'ವಿಕೇಂಡ್ ವಿಥ್ ರಮೇಶ್' ಕಾರ್ಯಕ್ರಮ ಈ ವಾರ ಪ್ರಸಾರವಾಗುವುದಿಲ್ಲ. ಬದಲಾಗಿ ಅನ್ಯಕಾರ್ಯಕ್ರಮಗಳ ಪ್ರಸಾರ ಮಾಡಲಾಗುತ್ತಿದೆ.

ಕಳೆದ ಬಾರಿಯಂತೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಮನೆ ಮಂದಿಯೆಲ್ಲ ಟಿವಿ ಮುಂದೆ ಕುಳಿತು, ವಿಕೇಂಡ್ ಟೆಂಟ್​ಲ್ಲಿ ಬರೋ ಸಾಧಕರ ಸಾಹಸಗಾಥೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಈ ವಾರ ವಿಕೇಂಡ್ ವಿಥ್ ರಮೇಶ್​ ಕಾರ್ಯಕ್ರಮಕ್ಕೆ ಕೊಂಚ ಬ್ರೇಕ್​ ಹಾಕಲಾಗಿದೆ. ಅಷ್ಟಕ್ಕೂ ಝೀ ವಾಹಿನಿಯ ಈ ನಿರ್ಧಾರಕ್ಕೆ ಮುಖ್ಯ ಕಾರಣ ಏನು ಅಂತೀರಾ ?

ಶನಿವಾರ 'ಸರಿಗಮಪ ಸೀಸನ್ 16' ಕಾರ್ಯಕ್ರಮದ ಮಹಾ ಸಂಚಿಕೆ ಪ್ರಸಾರವಾಗುತ್ತಿದೆ. ಭಾನುವಾರ ಪುನೀತ್ ರಾಜ್ ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾ ಪ್ರಸಾರ ಮಾಡಲಾಗುತ್ತಿದೆ. ಅಂದು ಸಂಜೆ 7 ಗಂಟೆಯಿಂದ 'ನಟ ಸಾರ್ವಭೌಮ' ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದು, ಜಾಹಿರಾತುಗಳ ಸಂಖ್ಯೆ ಜಾಸ್ತಿ ಇರುತ್ತದೆ. ಈ ಹಿನ್ನೆಲೆ ರಾತ್ರಿ 10 ಗಂಟೆಗೆ ನಟಸಾರ್ವಭೌಮ ಚಿತ್ರಕ್ಕೆ ಶುಭಂ ಹೇಳಬಹುದು. ಹೀಗಾಗಿ, ವಿಕೇಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಮಧ್ಯಂತರ ತಡೆ ನೀಡಲಾಗಿದೆಯಂತೆ.

ಮುಂದಿನ ವಾರ ಅಂದರೆ ಜೂನ್ 1 ಮತ್ತು 2 ರಂದು ವಿಕೇಂಡ್ ವಿಥ್ ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಆ ವಾರ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಸಾಧಕರ ಸೀಟಿನ ಮೇಲೆ ಕುಳಿತುಕೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details