ಕರ್ನಾಟಕ

karnataka

ETV Bharat / sitara

ಆ 'ಹಿರಿಯ ಪತ್ರಕರ್ತ' ಬಂದರೆ ಈ ನಟಿಯರು ಬಿಗ್​​ಬಾಸ್​​​​ಗೆ ಬರಲ್ವಂತೆ! - ಆ ಪತ್ರಕರ್ತರ ಕಾರಣ ಬಿಗ್​ಬಾಸ್​​​​ 7ಕ್ಕೆ ಬರಲು ಇಬ್ಬರು ನಟಿಯರ ನಕಾರ

ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಾಳೆಯಿಂದ ಪ್ರಸಾರವಾಗುತ್ತಿರುವ ಬಿಗ್​ಬಾಸ್​​​ ಕಾರ್ಯಕ್ರಮಕ್ಕೆ ಇಬ್ಬರು ನಟಿಯರು ಕೊನೆ ಹಂತದಲ್ಲಿ ನಕಾರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಈ ಬಾರಿ ಹಿರಿಯ ಪತ್ರಕರ್ತರೊಬ್ಬರು ಬಿಗ್​ಬಾಸ್ ಮನೆಗೆ ಬರುತ್ತಿರುವುದು.

ಸುದೀಪ್

By

Published : Oct 12, 2019, 7:17 PM IST

ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗುವ ಸೆಲೆಬ್ರಿಟಿಗಳು ಯಾರೆಂಬ ಮಾಹಿತಿಯನ್ನು ಕಲರ್ಸ್ ಕನ್ನಡ ವಾಹಿನಿ ಇನ್ನೂ ಬಿಟ್ಟುಕೊಟ್ಟಿಲ್ಲವಾದರೂ ಕೆಲವು ಸೆಲೆಬ್ರಿಟಿಗಳ ಹೆಸರು ಅಂತಿಮವಾಗಿದೆ. ಅದರಲ್ಲಿ ಹಿರಿಯ ನಟ ಜೈಗದೀಶ್, ಕಿರುತೆರೆ ನಟಿ ಸುಜಾತ, ದುನಿಯಾ ರಶ್ಮಿ ಸೇರಿದಂತೆ ಮತ್ತಿತರರ ಹೆಸರುಗಳು ಸದ್ದು ಮಾಡ್ತಿವೆ.

ಬಿಗ್​ಬಾಸ್ ಸೀಸನ್ 7

ಆದರೆ ಇಬ್ಬರು ಖ್ಯಾತ ನಟಿಯರು ಕೊನೆ ಗಳಿಗೆಯಲ್ಲಿ ಬಿಗ್​​ಬಾಸ್​​​​ ಕಾರ್ಯಕ್ರಮದಲ್ಲಿ ಸ್ಫರ್ಧಿಸಲು ಹಿಂಜರಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಹಿರಿಯ ಪತ್ರಕರ್ತರೊಬ್ಬರು ಈ ಬಾರಿ ಬಿಗ್​ಬಾಸ್​​​ನಲ್ಲಿ ಭಾಗವಹಿಸುತ್ತಿರುವುದು. ಅದರಲ್ಲಿ ಸ್ಯಾಂಡಲ್​​ವುಡ್ ಖ್ಯಾತ ನಟಿ ಹಾಗೂ ಕಿರುತೆರೆ ಖ್ಯಾತ ನಟಿ ಇಬ್ಬರೂ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರಂತೆ. ಶಾಪಿಂಗ್ ಕೂಡಾ ಮುಗಿಸಿ ಲಗೇಜ್ ಕೂಡಾ ಪ್ಯಾಕ್ ಮಾಡಿದ್ದರಂತೆ. ಆದರೆ ಕೊನೆ ಘಳಿಗೆಯಲ್ಲಿ ಈ ಧಿಡೀರ್ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನಾಳೆ ಬೆಳಗ್ಗಿನಿಂದಲೇ ಬಿಗ್​ಬಾಸ್ ಮನೆಯಲ್ಲಿ ಶೂಟಿಂಗ್ ಆರಂಭವಾಗಲಿದ್ದು ಸ್ಪರ್ಧಿಗಳ ಪಟ್ಟಿಯಲ್ಲಿ ಕೊನೆಯ ಹಂತದಲ್ಲಿ ಕೂಡಾ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ABOUT THE AUTHOR

...view details