ಕಿರುತೆರೆಯಿಂದ ಬೆಳ್ಳಿತೆರೆಗೆ, ಬೆಳ್ಳಿ ತೆರೆಯಿಂದ ಕಿರುತೆರೆಗೆ ಎಷ್ಟೋ ನಟ-ನಟಿಯರು ಬಂದು ಹೋಗಿದ್ದಾರೆ. ಆದರೆ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಸ್ಟಾರ್ ನಟರು ಕಿರುತೆರೆಗೆ ಬಂದು ಹೋಗಿದ್ದಾರೆ. ಆದರೆ ಇವರು ಕೆಲವೊಂದು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ, ನಿರೂಪಕರಾಗಿ ಹಾಗೂ ಕೆಲವೊಂದು ಧಾರಾವಾಹಿಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಹೋಗಿದ್ದಾರೆ.
ಲಕ್ಷ್ಮಿ
ಕನ್ನಡ ಸೇರಿದಂತೆ ತಮಿಳು , ತೆಲುಗು , ಹಿಂದಿ ಭಾಷೆಗಳಲ್ಲಿ ನಟಿಸಿ ಮನೆಮಾತಾದ ಲಕ್ಷ್ಮಿ ಜ್ಯೂಲಿ ಲಕ್ಷ್ಮಿ ಎಂದೇ ಫೇಮಸ್. ಕಥೆಯಲ್ಲ ಜೀವನ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದ ಲಕ್ಷ್ಮಿ, ಮುಂದೆ ಜೀ ಕನ್ನಡದ ಡ್ರಾಮಾ ಜೂನಿಯರ್ಸ್ನಲ್ಲಿ ತೀರ್ಪುಗಾರರಾಗಿ ಕನ್ನಡಿಗರ ಪ್ರೀತಿ ಗಳಿಸಿದರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ನಿರೂಪಕರಾಗಿಯೂ ಆಕೆ ಮನೆ ಮಾತಾಗಿದ್ದರು.
ರವಿಚಂದ್ರನ್
ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಚಂದನವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತ ಡ್ಯಾನ್ಸ್ ಶೋ ನಲ್ಲಿ ತೀರ್ಪುಗಾರರಾಗಿ ರವಿಚಂದ್ರನ್ ಕಾರ್ಯ ನಿರ್ವಹಿಸಿದ್ದಾರೆ.
ಸುದೀಪ್
ಬಿಗ್ ಬಾಸ್ ಎಂದರೆ ನೆನಪಿಗೆ ಬರುವುದು ಸುದೀಪ್, 7 ಎಪಿಸೋಡ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕೊರೊನಾ ಸಮಸ್ಯೆ ಇಲ್ಲದಿದ್ದರೆ ಈ ವೇಳೆಗೆ 8ನೇ ಬಿಗ್ ಬಾಸ್ ಆವೃತ್ತಿಗೆ ನಿರೂಪಣೆ ಮಾಡಬೇಕಿತ್ತು. ಬಿಗ್ಬಾಸ್ ಮೂಲಕ ತಾನೊಬ್ಬ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮಾತ್ರವಲ್ಲ ನಿರೂಪಕ ಎಂದು ಸುದೀಪ್ ಸಾಬೀತು ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಟ್ಟಿರುವ ಪುನೀತ್ ಕೂಡಾ ತಾನು ನಟ ಮಾತ್ರವಲ್ಲ ನಿರೂಪಣೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಪುನೀತ್ ಯಶಸ್ವಿ ಮೂರು ಎಪಿಸೋಡ್ಗಳನ್ನು ನಡೆಸಿಕೊಟ್ಟಿದ್ದಾರೆ.
ಶಿವರಾಜ್ಕುಮಾರ್
ಯಂಗ್ ಅ್ಯಂಡ್ ಎನರ್ಜಿಟಿಕ್ ಹಿರೋ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಗಾಯಕ, ನಟ, ಡ್ಯಾನ್ಸರ್ ಆಗಿ ಕರುನಾಡ ಚಕ್ರವರ್ತಿ ಎಂದು ಹೆಸರಾಗಿದ್ದಾರೆ. ಇದರ ಜೊತೆಗೆ ನಿರೂಪಣೆಯಲ್ಲೂ ಸೈ ಎನ್ನಿಸಿಕೊಂಡಿರುವ ಅವರು. ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.
ಜಗ್ಗೇಶ್