'ರಾಧಾ ರಮಣ' ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಸಿತಾರಾ ದೇವಿ ಎಂದೇ ಜನಪ್ರಿಯವಾಗಿದ್ದ ಸುಜಾತಾ ಅಕ್ಷಯಾ ಬಿಗ್ ಬಾಸ್ನಿಂದ ಹೊರಬಂದಿದ್ದಾರೆ. ಬಿಗ್ಬಾಸ್ ಮನೆಗೆ ಹೋದ ಹೊಸತರಲ್ಲಿ ಸುಜಾತ ತಮಗೆ ನೀಡಿದ್ದ ಟಾಸ್ಕ್ಗಳನ್ನು ಚೆನ್ನಾಗಿ ಮಾಡುತ್ತಿದ್ದರು. ಆದರೆ ಟಾಸ್ಕ್ ಒಂದರಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡಿದ್ದ ಸುಜಾತಾ ನಂತರ ಯಾವ ಟಾಸ್ಕ್ಗಳನ್ನು ಮಾಡಲಾಗದೆ ಎಲಿಮಿನೇಟ್ ಆಗಿದ್ದರು.
ಬಿಗ್ಬಾಸ್ ಮನೆಯಿಂದ ಕಿಚನ್ಗೆ ದರ್ಬಾರ್ ಮಾಡಲು ಬಂದ ಸುಜಾತಾ - ಅಡುಗೆ ಕಾರ್ಯಕ್ರಮಕ್ಕೆ ಸುಜಾತಾ ವಾಪಸ್
ಬಿಗ್ಬಾಸ್ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ 'ಕಿಚನ್ ದರ್ಬಾರ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.
![ಬಿಗ್ಬಾಸ್ ಮನೆಯಿಂದ ಕಿಚನ್ಗೆ ದರ್ಬಾರ್ ಮಾಡಲು ಬಂದ ಸುಜಾತಾ Sujata akshaya](https://etvbharatimages.akamaized.net/etvbharat/prod-images/768-512-5260466-thumbnail-3x2-sujata.jpg)
ಇನ್ನು ಅಡುಗೆ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸುಜಾತಾ ದೊಡ್ಮನೆಯಲ್ಲಿ ಕೂಡಾ ಅಡುಗೆ ಕೋಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಇದೀಗ ಬಿಗ್ಬಾಸ್ನಿಂದ ಎಲಿಮಿನೇಟ್ ಆದ ನಂತರವೂ ಸುಜಾತಾ ಮತ್ತೆ ಕಿಚನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ 2-3 ದಿನಗಳ ನಂತರ, ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಗ್ಬಾಸ್ಗೆ ಹೋಗುವ ಮುನ್ನ ಸುಜಾತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಆದರೆ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಾಗ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮಕ್ಕೆ ಸುಜಾತಾ ವಾಪಸಾಗಿದ್ದಾರೆ.
ಬಿಗ್ಬಾಸ್ನಿಂದ ಹೊರಬಂದ ನಂತರ ಸುಜಾತಾ ಅವರಿಗೆ ಅಡುಗೆ ಕಾರ್ಯಕ್ರಮದ ಜೊತೆಗೆ ಹೊಸ ಧಾರಾವಾಹಿಗಳಲ್ಲಿ ಅಭಿನಯಿಸುವಂತೆ ಸಾಲು ಸಾಲು ಆಫರ್ಗಳು ಬರುತ್ತಿವೆಯಂತೆ. ಆದರೆ ಕುಟುಂಬದವರೊಂದಿಗೆ ಕೆಲವು ದಿನಗಳು ಕಾಲ ಕಳೆಯುವ ಸಲುವಾಗಿ ಯಾವ ಕಾರ್ಯಕ್ರಮವನ್ನೂ ಅವರು ಒಪ್ಪಿಕೊಂಡಿಲ್ಲವಂತೆ.