ಕರ್ನಾಟಕ

karnataka

ETV Bharat / sitara

ಶಂಕರ, ಪಾರ್ವತಿಯ ಮುದ್ದು ಪ್ರೇಮ ಕಥೆ ಶೀಘ್ರ ಅಂತ್ಯ!

ಕಲರ್ಸ್ ಕನ್ನಡ ವಾಹಿನಿಯ ಸೀತಾ ವಲ್ಲಭ ಪ್ರಸಾರ ನಿಲ್ಲಿಸಲಿದೆ. ಇದೀಗ ಅದರ ಜೊತೆಗೆ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿ ಕೂಡಾ ಮುಕ್ತಾಯಗೊಳ್ಳಲಿದೆ ಎಂಬ ಮಾತು ವೀಕ್ಷಕರಿಗೆ ಘಾಸಿ ನೀಡಿದೆ. ಆದರೆ ವಾಹಿನಿಯಿಂದ ಅಧಿಕೃತ ಮಾಹಿತಿ ಬರಬೇಕಿದೆ.

By

Published : Aug 6, 2020, 10:14 PM IST

Sarvamangala Mangalyay serial
ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ ಇತ್ತೀಚಿಗಷ್ಟೇ ಯಶಸ್ವಿ 400 ಸಂಚಿಕೆಗಳನ್ನು ಪೂರೈಸಿತ್ತು. ಲಾಕ್​ ಡೌನ್ ನಂತರ ಮತ್ತೆ ಈ ಧಾರಾವಾಹಿ ಪ್ರಸಾರ ಕಾಣಲಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿತ್ತು. ಅತ್ತ ಅದ್ಯಾವಾಗ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿ ಪ್ರಸಾರ ಕಾಣಲಿದೆ ಎಂದು ಪ್ರೇಕ್ಷಕ ಲೆಕ್ಕ ಹಾಕುತ್ತಿದ್ದರೆ, ಇತ್ತ ಧಾರಾವಾಹಿ ಸದ್ಯದಲ್ಲಿಯೇ ಮುಕ್ತಾಯಗೊಳ್ಳಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ

ಶಂಕರ ಹಾಗೂ ಪಾರ್ವತಿಯ ಮುದ್ದಾದ ಪ್ರೇಮ ಕಥೆಯನ್ನೊಳಗೊಂಡಿರುವ ಸರ್ವ ಮಂಗಳ ಮಾಂಗಲ್ಯೇ ಹಿಂದಿಯ ತೂ ಸೂರಜ್ ಮೇ ಸಾಂಜ್ ಪಿಯಾಜಿ ಯ ರೀಮೇಕ್ ಆಗಿದೆ. ಚಂದನ್ ಕುಮಾರ್ ನಾಯಕ ಶಂಕರನಾಗಿ ನಟಿಸಿದ್ದರೆ, ನಾಯಕಿ ಪಾರ್ವತಿ ಆಗಿ ಐಶ್ವರ್ಯಾ ಪಿಸ್ಸೆ ಅಭಿನಯಿಸಿದ್ದಾರೆ. ನಾಯಕ ಶಂಕರ ಪಾರ್ವತಿಯನ್ನು ಕಂಡು ಪ್ರೀತಿಯಲ್ಲಿ ಬೀಳುತ್ತಾನೆ ಮತ್ತು ಆಕಸ್ಮಿಕವಾಗಿ ಶಂಕರ ಮತ್ತು ಪಾರ್ವತಿ ಮದುವೆ ಕೂಡಾ ಆಗುತ್ತದೆ. ಸಂಪ್ರದಾಯದ ಜೊತೆಗೆ ಧರ್ಮವನ್ನೇ ಬದುಕು ಎಂದು ದೃಢವಾಗಿ ನಂಬಿರುವ ನಾಯಕ ಮಹಾಶಂಕರ ಬಲವಂತವಾಗಿ ನಾಯಕಿ ಪಾರ್ವತಿಯನ್ನು ಮದುವೆಯಾಗುತ್ತಾನೆ. ಮಾತ್ರವಲ್ಲ ಈ ಮದುವೆ ದೈವ ನಿರ್ಣಯ ಎಂದು ನಂಬಿದ್ದ ಮಹಾಶಂಕರನಿಗೆ ಪಾರ್ವತಿ ವ್ಯಕ್ತಿತ್ವ ಕೊಂಚವೂ ಹೊಂದಿಕೊಳ್ಳುವುದಿಲ್ಲ.

ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ

ಇತ್ತ ಪಾರ್ವತಿಯ ಅಜ್ಜಿಗೆ ಸಾಲ ಕೊಟ್ಟಿರುವ ಶಂಕರ ಮನೆಯ ಪತ್ರವನ್ನು ಅಡವಿಟ್ಟುಕೊಂಡಿರುತ್ತಾನೆ. ಅದೇ ಮನೆಯ ಹುಡುಗಿ ಪಾರ್ವತಿ ಎಂಬುದು ಅಜ್ಜಿಗೆ ತಿಳಿದಿರುವುದಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಶಂಕರನ ಮನೆ ಸೇರಿದ ಪಾರ್ವತಿ ಸಮಯ ನೋಡಿ ತನ್ನ ಮನೆಯ ಪತ್ರವನ್ನು ಕದ್ದು ಊರಿಗೆ ವಾಪಾಸ್ ಹೋಗುವ ಉಪಾಯ ಮಾಡುತ್ತಾಳೆ. ಈ ನಡುವೆ ಆಕೆಗೆ ಮಹಾಶಂಕರನ ಬದುಕಿನ ಸತ್ಯಗಳು ಒಂದೊಂದಾಗಿಯೇ ತಿಳಿಯುತ್ತದೆ. ಶಂಕರನಿಗೆ ತನ್ನ ಬಗೆಗಿರುವ ಪ್ರೀತಿ ಕಂಡು ಮನಸೋತ ಪಾರ್ವತಿ ಆತನ ಕಡೆಗೆ ವಾಲುತ್ತಾಳೆ. ಇಂತಿಪ್ಪ ವಿಭಿನ್ನ ರೀತಿಯ ಕಥಾ ಹಂದರವಿರುವ ಧಾರಾವಾಹಿ ಮುಗಿಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ABOUT THE AUTHOR

...view details