ಕರ್ನಾಟಕ

karnataka

ETV Bharat / sitara

ನಿಜ ಜೀವನದಲ್ಲೂ 'ಸರ್ವ ಮಂಗಳೆ' ಆದ ನಟಿ... ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಪಾರ್ವತಿ'

'ಅನುರೂಪ' ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಐಶ್ವರ್ಯ ಪಿಸ್ಸೆ ಇಂದು ತಮ್ಮ ಗೆಳೆಯ ಹರಿ ವಿನಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಐಶ್ವರ್ಯ 'ಸರ್ವಮಂಗಳ ಮಾಂಗಲ್ಯೇ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

By

Published : May 9, 2019, 11:27 PM IST

ಹರಿ ವಿನಯ್​​, ಐಶ್ವರ್ಯ ಪಿಸ್ಸೆ

'ಸರ್ವಮಂಗಳ ಮಾಂಗಲ್ಯೇ' ಧಾರವಾಹಿ ಖ್ಯಾತಿಯ ನಟಿ ಐಶ್ವರ್ಯ ಪಿಸ್ಸೆ ಇಂದು ತಮ್ಮ ಧೀರ್ಘಕಾಲದ ಗೆಳೆಯ ಹರಿ ವಿನಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಖಾಸಗಿಯಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಐಶ್ವರ್ಯ ಮತ್ತು ಹರಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯ ಅಭಿನಯದ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿ 200 ಎಪಿಸೋಡ್​​​​​ಗಳನ್ನು ಪೂರ್ಣಗೊಳಿಸಿದೆ. ಚಂದನ್ ಕುಮಾರ್​​​ ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಹರಿ ವಿನಯ್​​, ಐಶ್ವರ್ಯ ಪಿಸ್ಸೆ

'ಅನುರೂಪ' ಧಾರವಾಹಿ ಮೂಲಕ ಐಶ್ವರ್ಯ ಕಿರುತೆರೆಗೆ ಅಡಿಯಿಟ್ಟವರು. 'ಸರ್ವಮಂಗಳ ಮಾಂಗಲ್ಯೇ' ಧಾರವಾಹಿ ತೆಲುಗಿನಲ್ಲಿ 'ಅಗ್ನಿಸಾಕ್ಷಿ' ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಈ ಧಾರವಾಹಿಯಲ್ಲಿ ಐಶ್ವರ್ಯ ಪಾರ್ವತಿ ಪಾತ್ರ ಪೋಷಿಸಿದ್ದಾರೆ . 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಹೋದರಿಯಾಗಿ ಮುಗ್ಧ ಅಭಿನಯದ ಮೂಲಕ ಗಮನ ಸೆಳೆದಿದ್ದರು ಐಶ್ವರ್ಯ. 'ಪುನರ್ ವಿವಾಹ', 'ಗಿರಿಜಾ ಕಲ್ಯಾಣ' ಧಾರಾವಾಹಿಗಳಲ್ಲೂ ಐಶ್ವರ್ಯ ಅಭಿನಯಿಸಿದ್ದಾರೆ.

'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾ ನಂತರ ಐಶ್ವರ್ಯಾಗೆ ಸಾಕಷ್ಟು ಸಿನಿಮಾಗಳಿಂದ ಆಫರ್ ಬಂದಿತ್ತು. ಆದರೆ ತೆಲುಗು ಮತ್ತು ಕನ್ನಡ ಎರಡೂ ಕಡೆ ಸೀರಿಯಲ್ ನಡೆಯುತ್ತಿರುವ ಕಾರಣ ಸಮಯವಿಲ್ಲದೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ ಎಂದು ಐಶ್ವರ್ಯ ಹೇಳಿದ್ದಾರೆ. 'ಗಿರಿಜಾ ಕಲ್ಯಾಣ' ಧಾರವಾಹಿಯನ್ನು ಬಾಹುಬಲಿ ನಿರ್ಮಾಪಕರು ನಿರ್ಮಿಸಿದ್ದರು. ಅವರ ಕಡೆಯಿಂದ ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಅವಕಾಶ ಸಿಕ್ಕಿತು ಎನ್ನುತ್ತಾರೆ ಐಶ್ವರ್ಯ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸುವ ಆಸೆ ಇದೆ. ಈಗಾಗಲೇ ತೆಲುಗು, ತಮಿಳಿನಲ್ಲಿ ನಟಿಸಿದ್ದೇನೆ, ಮುಂದೆ ನೋಡಬೇಕು ಎನ್ನುತ್ತಾರೆ ಈ ಮುದ್ದುನಟಿ.

For All Latest Updates

TAGGED:

ABOUT THE AUTHOR

...view details