ಹೈದರಾಬಾದ್:ಕಿರುತೆರೆಯ ಜನಪ್ರಿಯ ಶೋ ಕನ್ನಡದ ಕೋಟ್ಯಧಿಪತಿ ಮತ್ತೆ ಆರಂಭವಾಗಿದ್ದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ವಾರಾಂತ್ಯದಲ್ಲಿ ಟಿವಿ ಮೂಲಕ ಎಲ್ಲರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ವಾರಾಂತ್ಯದ ಎಪಿಸೋಡ್ನಲ್ಲಿ ಹಾಟ್ಸೀಟ್ನಲ್ಲಿ ಕುಳಿತಿರುವ ಸ್ಪರ್ಧಿ ಕ್ರಿಕೆಟ್ ಅಭಿಮಾನಿ. ಪಕ್ಕಾ ಆರ್ಸಿಬಿ ಫ್ಯಾನ್ ಆಗಿರುವ ಇವರು ನಿರೂಪಕ ಪುನೀತ್ ರಾಜ್ಕುಮಾರ್ ಮುಂದೆ ತಮ್ಮ ನೆಚ್ಚಿನ ತಂಡದ ಮೇಲಿನ ಬದ್ಧತೆಯನ್ನು ಹೇಳಿಕೊಂಡಿದ್ದಾರೆ.
ಐಪಿಎಲ್ನಲ್ಲಿ ನೀವು ಯಾವ ತಂಡಕ್ಕೆ ಬೆಂಬಲ ನೀಡುತ್ತೀರಾ? ಎನ್ನುವ ಪುನೀತ್ ರಾಜ್ಕುಮಾರ್ ಪ್ರಶ್ನೆಗೆ ಸ್ಪರ್ಧಿ ಆರ್ಸಿಬಿ ಎಂದು ಥಟ್ಟನೆ ಉತ್ತರಿಸುತ್ತಾರೆ. ಆ ವೇಳೆ ಆರು ಸಲ ಸೋತ್ರೂ ಆರ್ಸಿಬಿ ಎಂದು ಪುನೀತ್ ರಾಜ್ಕುಮಾರ್ ಎಂದಾಗ ಅರವತ್ತು ಸಲ ಸೋತರೂ ಆರ್ಸಿಬಿನೇ ಎಂದು ಆ ಸ್ಪರ್ಧಿ ಹೇಳಿ ನೆಚ್ಚಿನ ಟೀಮ್ ಮೇಲಿನ ವ್ಯಾಮೋಹವನ್ನು ತೋರಿಸಿದ್ದಾರೆ.
ಕೆ.ಎಲ್ ರಾಹುಲ್ ತಮ್ಮ ನೆಚ್ಚಿನ ಆಟಗಾರ ಎನ್ನುವ ಈ ಸ್ಪರ್ಧಿ ಸದ್ಯ ವಿಶ್ವಕಪ್ನಲ್ಲಿ ಆಡುತ್ತಿರುವ ಏಕೈಕ ಕನ್ನಡಿಗ ಎಂಬ ಕಾರಣವನ್ನು ನೀಡುತ್ತಾರೆ. ಕಳೆದೆರಡು ಆವೃತ್ತಿಗಳಲ್ಲಿ ವಿಶ್ವಕಪ್ನಲ್ಲಿ ಯಾವುದೇ ಕರ್ನಾಟಕದ ಆಟಗಾರರು ಕಾಣಿಸಿಕೊಂಡಿರಲಿಲ್ಲ, ಈ ಬಾರಿ ಕೆ.ಎಲ್ ರಾಹುಲ್ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಈ ಎಪಿಸೋಡ್ ಇದೇ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.