ಕರ್ನಾಟಕ

karnataka

ETV Bharat / sitara

'ಆರಲ್ಲ, ಅರವತ್ತು ಸಲ ಸೋತ್ರು ಆರ್​ಸಿಬಿನೇ'! ಕೋಟಿ ಆಟದಲ್ಲೊಬ್ಬ ಪಕ್ಕಾ ಆರ್​ಸಿಬಿ ಫ್ಯಾನ್

ಈ ವಾರಾಂತ್ಯದ ಎಪಿಸೋಡ್​ನಲ್ಲಿ ಹಾಟ್​ಸೀಟ್​ನಲ್ಲಿ ಕುಳಿತಿರುವ ಸ್ಪರ್ಧಿ ಕ್ರಿಕೆಟ್ ಅಭಿಮಾನಿ. ಪಕ್ಕಾ ಆರ್​ಸಿಬಿ ಫ್ಯಾನ್​ ಆಗಿರುವ ಇವರು ನಿರೂಪಕ ಪುನೀತ್ ರಾಜ್​ಕುಮಾರ್​ ಮುಂದೆ ತಮ್ಮ ನೆಚ್ಚಿನ ತಂಡದ ಮೇಲಿನ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.

By

Published : Jun 25, 2019, 2:10 PM IST

ಆರ್​ಸಿಬಿ ಫ್ಯಾನ್

ಹೈದರಾಬಾದ್:ಕಿರುತೆರೆಯ ಜನಪ್ರಿಯ ಶೋ ಕನ್ನಡದ ಕೋಟ್ಯಧಿಪತಿ ಮತ್ತೆ ಆರಂಭವಾಗಿದ್ದು ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ವಾರಾಂತ್ಯದಲ್ಲಿ ಟಿವಿ ಮೂಲಕ ಎಲ್ಲರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಾರಾಂತ್ಯದ ಎಪಿಸೋಡ್​ನಲ್ಲಿ ಹಾಟ್​ಸೀಟ್​ನಲ್ಲಿ ಕುಳಿತಿರುವ ಸ್ಪರ್ಧಿ ಕ್ರಿಕೆಟ್ ಅಭಿಮಾನಿ. ಪಕ್ಕಾ ಆರ್​ಸಿಬಿ ಫ್ಯಾನ್​ ಆಗಿರುವ ಇವರು ನಿರೂಪಕ ಪುನೀತ್ ರಾಜ್​ಕುಮಾರ್​ ಮುಂದೆ ತಮ್ಮ ನೆಚ್ಚಿನ ತಂಡದ ಮೇಲಿನ ಬದ್ಧತೆಯನ್ನು ಹೇಳಿಕೊಂಡಿದ್ದಾರೆ.

ಐಪಿಎಲ್​​ನಲ್ಲಿ ನೀವು ಯಾವ ತಂಡಕ್ಕೆ ಬೆಂಬಲ ನೀಡುತ್ತೀರಾ? ಎನ್ನುವ ಪುನೀತ್ ರಾಜ್​ಕುಮಾರ್ ಪ್ರಶ್ನೆಗೆ ಸ್ಪರ್ಧಿ ಆರ್​ಸಿಬಿ ಎಂದು ಥಟ್ಟನೆ ಉತ್ತರಿಸುತ್ತಾರೆ. ಆ ವೇಳೆ ಆರು ಸಲ ಸೋತ್ರೂ ಆರ್​ಸಿಬಿ ಎಂದು ಪುನೀತ್ ರಾಜ್​ಕುಮಾರ್ ಎಂದಾಗ ಅರವತ್ತು ಸಲ ಸೋತರೂ ಆರ್​ಸಿಬಿನೇ ಎಂದು ಆ ಸ್ಪರ್ಧಿ ಹೇಳಿ ನೆಚ್ಚಿನ ಟೀಮ್ ಮೇಲಿನ ವ್ಯಾಮೋಹವನ್ನು ತೋರಿಸಿದ್ದಾರೆ.

ಕೆ.ಎಲ್​ ರಾಹುಲ್​ ತಮ್ಮ ನೆಚ್ಚಿನ ಆಟಗಾರ ಎನ್ನುವ ಈ ಸ್ಪರ್ಧಿ ಸದ್ಯ ವಿಶ್ವಕಪ್​ನಲ್ಲಿ ಆಡುತ್ತಿರುವ ಏಕೈಕ ಕನ್ನಡಿಗ ಎಂಬ ಕಾರಣವನ್ನು ನೀಡುತ್ತಾರೆ. ಕಳೆದೆರಡು ಆವೃತ್ತಿಗಳಲ್ಲಿ ವಿಶ್ವಕಪ್​ನಲ್ಲಿ ಯಾವುದೇ ಕರ್ನಾಟಕದ ಆಟಗಾರರು ಕಾಣಿಸಿಕೊಂಡಿರಲಿಲ್ಲ, ಈ ಬಾರಿ ಕೆ.ಎಲ್​ ರಾಹುಲ್ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಈ ಎಪಿಸೋಡ್ ಇದೇ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.

ABOUT THE AUTHOR

...view details