ಕರ್ನಾಟಕ

karnataka

By

Published : Sep 23, 2019, 10:15 AM IST

ETV Bharat / sitara

ಕೋಟ್ಯಧಿಪತಿ ವೇದಿಕೆಯಲ್ಲಿ ಜ್ಯೂ. ಎನ್​​ಟಿಆರ್​ ನೆನಪಿಸಿಕೊಂಡ ಪುನೀತ್ ರಾಜ್​​​​ಕುಮಾರ್

ನಿನ್ನೆಯ ಕನ್ನಡದ ಕೋಟ್ಯಧಿಪತಿ ಎಪಿಸೋಡ್​​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ತೆಲುಗು ನಟ ಜ್ಯೂನಿಯರ್ ಎನ್​​​​ಟಿಆರ್ ಹಾಗೂ ತಮ್ಮ ಸ್ನೇಹವನ್ನು ನೆನೆದರು. ತಮ್ಮ ‘ಚಕ್ರವ್ಯೂಹ’ ಸಿನಿಮಾಗೆ ಹಾಡು ಹೇಳಿದ ಜ್ಯೂ. ಎನ್​​ಟಿಆರ್​​​​​ಗೆ ಧನ್ಯವಾದ ಕೂಡಾ ಅರ್ಪಿಸಿದರು.

ಪುನೀತ್, ಜ್ಯೂ.ಎನ್​​ಟಿಆರ್

ಡಾ. ರಾಜ್​​​​​​​​ಕುಮಾರ್ ಹಾಗೂ ಎನ್​​.ಟಿ. ರಾಮರಾವ್​​​​ ಕುಟುಂಬಕ್ಕೆ ಬಹಳ ವರ್ಷಗಳ ಸ್ನೇಹ ಇರುವುದು ಎಲ್ಲರಿಗೂ ತಿಳಿದ ವಿಷಯ. ಅದು ಅವರ ಮುಂದಿನ ತಲೆಮಾರಿಗೆ ಕೂಡ ಹಬ್ಬಿರುವುದು ನಿಜ. ಬಾಲಕೃಷ್ಣ ಅವರು ಶಿವಣ್ಣ ಅವರ ಬಹುತೇಕ ಸಿನಿಮಾಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಶಿವರಾಜ್​​ಕುಮಾರ್ ಕೂಡ ಬಾಲಕೃಷ್ಣ ಅವರ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಚಕ್ರವ್ಯೂಹ’ಕ್ಕೆ ಜ್ಯೂನಿಯರ್ ಎನ್​ಟಿಆರ್ ಒಂದು ಸಾಂಗ್​ಅನ್ನೂ ಹೇಳಿದ್ದಾರೆ.

ಇನ್ನು ಪುನೀತ್ ರಾಜ್​ಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಭಾನುವಾರ ರಾತ್ರಿ ‘ಕನ್ನಡದ ಕೋಟ್ಯಧಿಪತಿ’ ಎಪಿಸೋಡ್​​​​​​ನಲ್ಲಿ ಹಾಟ್​ ಸೀಟಿನಲ್ಲಿ ಕುಳಿತಿದ್ದ ತುಮಕೂರಿನ ತನ್ಮಯ ಅವರಿಗೆ ಒಂದು ಆಡಿಯೋ ಪ್ರಶ್ನೆ ಎದುರಾಯಿತು. ಪುನೀತ್ ರಾಜ್​ಕುಮಾರ್ ಅಭಿನಯದ ‘ಚಕ್ರವ್ಯೂಹ’ ಸಿನಿಮಾದ 'ಗೆಳೆಯ ಗೆಳೆಯ ಗೆಲುವು ನಮ್ಮದಯ್ಯ' ಹಾಡನ್ನು ಕೇಳಿಸಿ ಆ ಹಾಡು ಹಾಡಿದ ಗಾಯಕ ಯಾರು ಎಂದು ಕೇಳಲಾಯಿತು. ಕಡೆಗೂ ತನ್ಮಯ ಆ ಧ್ವನಿ ಜ್ಯೂನಿಯರ್ ಎನ್​​ಟಿಆರ್ ಅವರದ್ದು ಎಂದು ಉತ್ತರಿಸಿದರು.

ನಂತರ ಜ್ಯೂ. ಎನ್​​ಟಿಆರ್ ನೆನಪಿಸಿಕೊಂಡ ಪುನೀತ್ ರಾಜಕುಮಾರ್ ಆತ ನನ್ನ ನೆಚ್ಚಿನ ಸ್ನೇಹಿತ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸಹೋದರ ಇದ್ದಂತೆ ಎಂದು ಇಬ್ಬರ ಸ್ನೇಹವನ್ನು ನೆನೆದರು. ಜ್ಯೂನಿಯರ್ ಎನ್​​ಟಿಆರ್ ಅವರ ತಾಯಿ ಉಡುಪಿಯ ಕುಂದಾಪುರದವರು. 'ಚಕ್ರವ್ಯೂಹ' ಚಿತ್ರಕ್ಕೆ ಹಾಡು ಹೇಳುವಾಗ ತಾರಕ್ ತಾಯಿ ತಮ್ಮ ಮನೆಗೆ ಕರೆಸಿ ಒಳ್ಳೆ ಆತಿಥ್ಯ ನೀಡಿದ್ದರು. ನಮಗೆ ಇಷ್ಟವಾದ ಅಡುಗೆ ಮಾಡಿದ್ದರು ಎಂದು ಪುನೀತ್​ ನೆನಪಿಸಿಕೊಂಡರು. ಅವರ ಸ್ನೇಹವನ್ನು ಎಂದಿಗೂ ಮರೆಯಲಾರೆ ಎಂದು ತಮ್ಮ ಚಿತ್ರಕ್ಕೆ ಹಾಡಿದ ಜ್ಯೂ. ಎನ್​ಟಿಆರ್​ಗೆ ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದ್ರು.

ABOUT THE AUTHOR

...view details