ಕರ್ನಾಟಕ

karnataka

ETV Bharat / sitara

'ಇವಳು ಸುಜಾತಾ' ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ...ಬೇಸರ ಹೊರಹಾಕಿದ ನಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇವಳು ಸುಜಾತಾ' ಧಾರಾವಾಹಿ ಇತ್ತೀಚೆಗೆ ಮುಗಿದಿದ್ದು ಧಾರಾವಾಹಿ ತಂಡವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ನಟಿ ಮೇಘಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

By

Published : Jul 7, 2020, 2:46 PM IST

Meghashree shared shooting spot photo
ಇವಳು ಸುಜಾತಾ

ನಟಿ ಮೇಘಶ್ರೀ ಕನ್ನಡ ಪ್ರೇಕ್ಷಕರಿಗೆ ಬಹಳ ಚಿರಪರಿಚಿತ. ಮನೋಜ್ಞವಾದ ನಟನೆಯಿಂದಲೇ ವೀಕ್ಷಕರ ಮನ ಸೆಳೆದಿರುವ ಅವರು, ಕೃಷ್ಣ ತುಳಸಿ, ಕದ್ದುಮುಚ್ಚಿ , ದಶರಥ ಸೇರಿದಂತೆ ಕನ್ನಡ, ತೆಲುಗು,ತಮಿಳು ಚಿತ್ರಗಳಲ್ಲಿ ನಟಿಸಿ ತ್ರಿಭಾಷಾ ತಾರೆ ಎನಿಸಿಕೊಂಡಿದ್ದಾರೆ‌.

ಇವಳು ಸುಜಾತಾ ನಟಿ

ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಮಿಂಚಿರುವ ಮೇಘಶ್ರೀ ಕಿರುತೆರೆ ಯಾನ ಆರಂಭಿಸಿದ್ದು 'ನಾಗಕನ್ನಿಕೆ' ಧಾರಾವಾಹಿಯ ಶೇಷ ಪಾತ್ರದ ಮೂಲಕ. ಈ ಧಾರಾವಾಹಿ ನಂತರ ಬೆಳ್ಳಿತೆರೆಗೆ ಹಾರಿದ ಮೇಘಶ್ರೀ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಸುಜಾತಾ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇವಳು ಸುಜಾತಾ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಮತ್ತೆ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ವಿಧವೆ ಪಟ್ಟ ಹೊತ್ತು. ತನ್ನ ಹೆತ್ತವರೊಂದಿಗೆ ಅತ್ತೆ ಮಾವನನ್ನೂ ನೋಡಿಕೊಳ್ಳುತ್ತಿರುವ ಹೆಣ್ಣುಮಗಳ ಕಥೆ ಹೊಂದಿರುವ ಈ ಧಾರಾವಾಹಿ ಇತ್ತೀಚೆಗೆ ಅಂತ್ಯಗೊಂಡಿದೆ. ಈ ಬಗ್ಗೆ ಮೇಘಶ್ರೀ ಬೇಸರ ಹೊರಹಾಕಿದ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ದು:ಖ ಹಂಚಿಕೊಂಡಿದ್ದಾರೆ.

ಬೆಳ್ಳಿ ತೆರೆಯಲ್ಲೂ ಮಿಂಚಿರುವ ಮೇಘಶ್ರೀ

ಇಂದು ಸೆಟ್​​​​ನಲ್ಲಿ ಕೊನೆಯ ದಿನ 'ಇವಳು ಸುಜಾಜಾ' ಟೀಮ್​ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಅವಕಾಶ ನೀಡಿದಕ್ಕಾಗಿ ಸೃಜನ್ ಲೋಕೇಶ್ ಹಾಗೂ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದು ತನ್ನ ಸಹಕಲಾವಿದರ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಬಿಗ್​ಬಾಸ್ ಸೀಸನ್ 6 ರಲ್ಲಿ ಕೂಡಾ ಮೇಘಶ್ರೀ ವೈಲ್ಡ್​ ಕಾರ್ಡ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ABOUT THE AUTHOR

...view details