ಕರ್ನಾಟಕ

karnataka

ಇಂದಿನಿಂದ ಹೊಸ ಎಪಿಸೋಡ್​​​​​​ಗಳ ಧಾರಾವಾಹಿಗಳ ಪ್ರಸಾರ

By

Published : Jun 1, 2020, 2:34 PM IST

ಇಂದಿನಿಂದ ಕಿರುತೆರೆಯ ವೀಕ್ಷಕರಿಗೆ ಸುಗ್ಗಿಯೋ ಸುಗ್ಗಿ! ಯಾಕಂತೀರಾ? ಕಳೆದ ಒಂದೂವರೆ ತಿಂಗಳಿನಿಂದ ಪ್ರಸಾರ ನಿಲ್ಲಿಸಿದ್ದ ಧಾರಾವಾಹಿಗಳ ಶೂಟಿಂಗ್​ ಒಂದು ವಾರದಿಂದ ಆರಂಭವಾಗಿದ್ದು, ಇಂದಿನಿಂದ ಹೊಸ ಎಪಿಸೋಡ್​ ಗಳ ಪ್ರಸಾರ ಆರಂಭವಾಗಲಿದೆ.

Serial
Serial

ಒಂದೂವರೆ ತಿಂಗಳಿನಿಂದ ಯಾವುದೇ ಧಾರಾವಾಹಿಗಳಿಲ್ಲದೇ ಕಂಗಲಾಗಿ ಕುಳಿತಿದ್ದ ಪ್ರೇಕ್ಷಕರು ಇಂದು ಸಂಜೆ ಯಾವಾಗ ಆಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಂಗನಾಯಕಿ ಧಾರಾವಾಹಿ ಟಿಆರ್​ಪಿ ಕಡಿಮೆ ಇರುವ ಕಾರಣದಿಂದ ಪ್ರಸಾರ ನಿಲ್ಲಿಸಿದೆ.

2019 ರಲ್ಲಿ ಆರಂಭವಾಗಿರುವ ರಂಗನಾಯಕಿ ಧಾರಾವಾಹಿ ಅತೀ ಕಡಿಮೆ ಅವಧಿಯಲ್ಲಿ ಪ್ರಸಾರ ನಿಲ್ಲಿಸಿರುವುದು ಬೇಸರದ ಸಂಗತಿಯಾದರೂ ಟಿಆರ್​ಪಿ ಕಡಿಮೆ ಇರುವ ಕಾರಣ ಅದನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ. ಅಂದ ಹಾಗೇ ಪ್ರತಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದ ರಂಗನಾಯಕಿ ಮುಕ್ತಾಯಗೊಂಡಿರುವುದರಿಂದ ಆ ಜಾಗಕ್ಕೆ ಸೀತಾವಲ್ಲಭ ಧಾರಾವಾಹಿ ಪ್ರಸಾರ ಕಾಣಲಿದೆ.

ಧಾರಾವಾಹಿ ಆರಂಭವಾದಾಗಿನಿಂದ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯನಾಗಿ ಅಭಿನಯಿಸುತ್ತಿರುವ ಜಗನ್ ಮತ್ತು ನಾಯಕಿ ಮೈಥಿಲಿ ಆಗಿ ನಟಿಸುತ್ತಿರುವ ಸುಪ್ರಿಯಾ ಸತ್ಯನಾರಾಯಣ ಅವರ ಮೋಹಕ ಕೆಮೆಸ್ಟ್ರಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಈ ಮುದ್ದಾದ ಜೋಡಿಯನ್ನು ನೋಡಲು 10 ಗಂಟೆಯ ತನಕ ಕಾಯಬೇಕಿತ್ತು‌. ಆದರೆ ಇನ್ಮುಂದೆ ಬಹು ಬೇಗನೇ ನೋಡಬಹುದಾಗಿದೆ.

ಅದಲು ಬದಲಾದ ಧಾರಾವಾಹಿ ಪ್ರಸಾರದ ಸಮಯ!

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಜನಪ್ರಿಯ ಧಾರಾವಾಹಿಗಳ ಸಮಯ ಅದಲು ಬದಲಾಗಿದೆ. 7.30 ಗೆ ಪ್ರಸಾರವಾಗುತ್ತಿದ್ದ ಯಾರೇ ನೀ ಮೋಹಿನಿ ಧಾರಾವಾಹಿ ಇಂದಿನಿಂದ ಪ್ರತಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಅದೇ ರೀತಿ ಇಷ್ಟು ದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿ 7.30ಕ್ಕೆ ಪ್ರಸಾರವಾಗಲಿದೆ.

ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಪ್ರಸಾರ ನಿಲ್ಲಿಸಿದ್ದು ಸುಬ್ಬಲಕ್ಷ್ಮಿ ಸಂಸಾರದ ಜಾಗದಲ್ಲಿ ಮಾಲ್ಗುಡಿ ಡೇಸ್ ಬರಲಿದೆ. ಉಳಿದಂತೆ ಎಲ್ಲ ಧಾರಾವಾಹಿಯನ್ನು ವೀಕ್ಷಕರು ನೋಡಿ ಆನಂದಿಸಬಹುದು.

ಸ್ಟಾರ್ ಸುವರ್ಣದಲ್ಲಿ ಏನೆಲ್ಲಾ ಪ್ರಸಾರವಾಗುತ್ತಿದೆ?

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಇಂತಿ ನಿಮ್ಮ ಆಶಾ, ಸಂಜೆ 6.30 ಗೆ ಜೀವ ಹೂವಾಗಿದೆ ಹಾಗೂ ರಾತ್ರಿ 7 ಗಂಟೆಗೆ ಮುದ್ದು ಲಕ್ಷ್ಮಿ ಧಾರಾವಾಹಿಗಳ ಹೊಸ ಸಂಚಿಕೆಗಳು ಇಂದು ಸಂಜೆಯಿಂದ ಪ್ರಸಾರವಾಗಲಿವೆ. ಇದರ ಜೊತೆಗೆ ಸಂಜೆ 5 ಮತ್ತು ರಾತ್ರಿ 9.30ಕ್ಕೆ ರಾಧಾ ಕೃಷ್ಣ ಧಾರಾವಾಹಿ ಮತ್ತು ರಾತ್ರಿ 8 ಗಂಟೆಗೆ ಮಹಾಭಾರತ ಧಾರಾವಾಹಿ ಆರಂಭವಾಗಲಿದೆ. ಇದರ ಜೊತೆಗೆ ಹೊಚ್ಚ ಹೊಸ ಧಾರಾವಾಹಿ ಸಂಘರ್ಷ ಶುರುವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ABOUT THE AUTHOR

...view details