ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾವಲ್ಲಭ' ಧಾರಾವಾಹಿ ಈ ವಾರಾಂತ್ಯದಲ್ಲಿ ಮುಗಿಯಲಿದೆ. ಈ ಬೇಸರದ ನಡುವೆಯೂ ಸೀತಾವಲ್ಲಭ ಧಾರಾವಾಹಿ ತಂಡದಿಂದ ಇದೀಗ ವೀಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಜಗನ್ ಚಂದ್ರಶೇಖರ್ ಹಾಗೂ ಸುಪ್ರಿತಾ ಸತ್ಯನಾರಾಯಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಸೀತಾವಲ್ಲಭ' ಧಾರಾವಾಹಿಯ ಭಾಗ 2 ಪ್ರಸಾರವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಧಾರಾವಾಹಿಯಲ್ಲಿ ನಾಯಕ ಆರ್ಯವಲ್ಲಭ ಆಗಿ ನಟಿಸುತ್ತಿರುವ ಜಗನ್ ಚಂದ್ರಶೇಖರ್ ಈ ಬಗ್ಗೆ ಹೇಳಿದ್ದಾರೆ. 'ಎರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರಾವಾಹಿಯು ಕಿರುತೆರೆಯಾದ್ಯಂತ ಮನೆ ಮಾತಾಗಿದ್ದು ಜನರು ಅದನ್ನು ಇಷ್ಟಪಟ್ಟಿದ್ದಾರೆ. ಮಾತ್ರವಲ್ಲ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಧಾರಾವಾಹಿ ಮುಗಿಯುತ್ತಿರುವ ವಿಚಾರ ನಿಜಕ್ಕೂ ಬೇಸರ ತಂದಿದೆ'.