ಕರ್ನಾಟಕ

karnataka

ಬೆಳ್ಳಿ ತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದ 'ಮಂಗಳ ಗೌರಿ ಮದುವೆ' ಇನ್ಸ್​​ಪೆಕ್ಟರ್​ ರಾಜೀವ್

By

Published : Nov 14, 2019, 6:15 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಇನ್ಸ್​​​ಪೆಕ್ಟರ್​​​ ರಾಜೀವ್ ಪಾತ್ರದಲ್ಲಿ ನಟಿಸುತ್ತಿರುವ ಗಗನ್​ ಇದೀಗ ಬೆಳ್ಳಿ ತೆರೆಯಲ್ಲಿ ಕೂಡಾ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಗಗನ್

ಕಿರುತೆರೆ ಮೂಲಕ ನಟನೆ ಆರಂಭಿಸಿದ ಎಷ್ಟೋ ನಟರು ಕೆಲವು ದಿನಗಳ ನಂತರ ಬೆಳ್ಳಿ ತೆರೆಯಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿರುವ ಅನೇಕರು ಇಂದು ಮಹಾಪರದೆ ಮೇಲೆ ತಮ್ಮ ಛಾಪು ಮೂಡಿಸಿದ ಎಷ್ಟೋ ಉದಾಹರಣೆಗಳಿವೆ.

'ಮಂಗಳ ಗೌರಿ ಮದುವೆ' ಇನ್ಸ್​​ಪೆಕ್ಟರ್ ರಾಜೀವ್

ಇದೀಗ ಗಗನ್ ಚಿನ್ನಪ್ಪ ಸರದಿ. ಗಗನ್ ಚಿನ್ನಪ್ಪ ಎಂದರೆ ಬಹುಬೇಗನೆ ಯಾರು ಎಂದು ತಿಳಿಯುವುದಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಇನ್ಸ್​​​ಪೆಕ್ಟರ್​​​ ರಾಜೀವ್ ಪಾತ್ರದಲ್ಲಿ ನಟಿಸುತ್ತಿರುವ ಗಗನ್​ ಇದೀಗ ಬೆಳ್ಳಿ ತೆರೆಯಲ್ಲಿ ಕೂಡಾ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಂಜಿನ ನಗರಿ ಮಡಿಕೇರಿಯ ಹುಡುಗ ಗಗನ್ ಚಿನ್ನಪ್ಪ, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಇನ್ಸ್​​​​​​​​​​​ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ 'ಮಂಗಳ ಗೌರಿ ಮದುವೆ'ಯಲ್ಲೂ ಇವರ ಪಾತ್ರ ಮುಂದುವರೆದಿದ್ದು, ಈ ಧಾರಾವಾಹಿಯಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಸದ್ಯ ನಂಬರ್​​​ 1 ಸ್ಥಾನದಲ್ಲಿದೆ‌.

ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಗಗನ್ ಚಿನ್ನಪ್ಪ

ಕಿರುತೆರೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಿರುವ ಗಗನ್, ಇದೀಗ ಬೆಳ್ಳಿ ತೆರೆಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. 'ಮದ್ವೆ' ಚಿತ್ರವನ್ನು ನಿರ್ದೇಶಿಸಿದ್ದ ಹಿಂದು ಕೃಷ್ಣ, ಅಲೆಗ್ಸಾಂಡರ್ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗಗನ್ ನಾಯಕನಾಗಿ ಅಭಿನಯಿಸಿದ್ದಾರೆ. ಈಗ ಈ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಫಸ್ಟ್ ​​ಲುಕ್ ಬಿಡುಗಡೆಯಾಗಲಿದೆ.

ABOUT THE AUTHOR

...view details