ಕರ್ನಾಟಕ

karnataka

ETV Bharat / sitara

ಆ ಖ್ಯಾತ ನಟನ ಸಮಾಜಸೇವೆಯನ್ನು ಕಿರುಚಿತ್ರದ ಮೂಲಕ ತೋರಿಸಿದ ಯತಿರಾಜ್​​​ - Sonu sood social work

ಕಳೆದ 5-6 ತಿಂಗಳಿಂದ ಕಿರುಚಿತ್ರ ತಯಾರಿಕೆಯಲ್ಲಿ ಬ್ಯುಸಿ ಇರುವ ನಟ ಯತಿರಾಜ್, ಈ ಬಾರಿ ಖ್ಯಾತ ನಟ ಸೋನುಸೂದ್ ಸಮಾಜಸೇವೆಯನ್ನು ಕಿರುಚಿತ್ರದ ಮೂಲಕ ತೋರಿಸಿದ್ದಾರೆ. 'ದೇವದೂತ' ಹೆಸರಿನ ಈ ಕಿರುಚಿತ್ರವನ್ನು ತಮ್ಮ ಕಲಾವಿಧ ಯೂಟ್ಯೂಬ್​ ಚಾನೆಲ್​​​ನಲ್ಲಿ ಬಿಡುಗಡೆ ಮಾಡಿದ್ದಾರೆ.

Devadoota short movie
ಯತಿರಾಜ್​​​​​​​​​​​

By

Published : Sep 5, 2020, 10:37 AM IST

ನಟ, ನಿರ್ದೇಶಕ, ಬರಹಗಾರ ಯತಿರಾಜ್​ ಈ ಲಾಕ್​​ಡೌನ್ ಸಮಯದಲ್ಲಿ ಅನೇಕ ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರಗಳನ್ನು ತಯಾರಿಸಿ ತಮ್ಮ ಕಲಾವಿಧ ಯೂಟ್ಯೂಬ್​ ಚಾನೆಲ್​​​ ಮೂಲಕ ಬಿಡುಗಡೆ ಮಾಡಿದ್ದಾರೆ.

ಸೋನು ಸೂದ್

ಇದೀಗ ಯತಿರಾತ್ 'ದೇವದೂತ' ಎಂಬ ಮತ್ತೊಂದು ಕಿರುಚಿತ್ರ ತಯಾರಿಸಿ ನಿನ್ನೆ ಅದನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಾ ನಿಜಜೀವನದಲ್ಲಿ ಬಡಬಗ್ಗರಿಗೆ ಸಹಾಯ ಮಾಡುತ್ತಾ ರಿಯಲ್ ಹೀರೋ ಎನಿಸಿಕೊಂಡ ಖ್ಯಾತ ನಟ ಸೋನು ಸೂದ್ ಅವರ ಬಗ್ಗೆ ಈ ಬಾರಿ ಯತಿರಾಜ್ ಈ ಕಿರುಚಿತ್ರ ತಯಾರಿಸಿದ್ದಾರೆ.

ಕಡುಬಡತನದ ಕುಟುಂಬವೊಂದು ಬಹಳ ಕಷ್ಟಪಡುತ್ತಿರುತ್ತದೆ. ಒಂದಷ್ಟು ಭೂಮಿ ಇದ್ದರೂ ಉಳಲು ಎತ್ತುಗಳಿಲ್ಲ. ಅಪ್ಪನ ಚಿಂತೆಯನ್ನು ಹೋಗಲಾಡಿಸಲು ಹೆಣ್ಣು ಮಕ್ಕಳು ಧೈರ್ಯ ತುಂಬಿ ತಾವೇ ಎತ್ತುಗಳಂತೆ ಹೊಲ ಉಳುತ್ತಾರೆ. ಇವರೆಲ್ಲಾ ಕಷ್ಟ ಪಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡುತ್ತಾರೆ.

'ದೇವದೂತ' ಕಿರುಚಿತ್ರದ ಕಲಾವಿದರು

ಈ ವಿಡಿಯೋ ವೈರಲ್ ಆಗಿ ಸೋನುಸೂದ್​ವರೆಗೂ ತಲುಪುತ್ತದೆ. ಆ ರೈತನ ಮೊಬೈಲ್ ನಂಬರ್ ಪಡೆದು ನಿಮಗೆ ಯಾವ ರೀತಿ ಸಹಾಯ ಬೇಕು ಎಂದು ಕೇಳಿದಾಗ ಎರಡು ಎತ್ತುಗಳನ್ನು ಕೊಡಿಸಿ ಎಂದು ಮನೆ ಒಡೆಯ ಕೇಳುತ್ತಾರೆ. ಆದರೆ ಸೋನು ಸೂದ್ ಒಂದು ಹೆಜ್ಜೆ ಮುಂದೆ ಹೋಗಿ ಎತ್ತುಗಳ ಬದಲಿಗೆ ಟ್ರ್ಯಾಕ್ಟರ್​​​​ ಕೊಡಿಸುತ್ತಾರೆ. ಸೋನುಸೂದ್ ಅವರ ಈ ಸಹಾಯಕ್ಕೆ ಕುಟುಂಬ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತದೆ.

ನಟ, ನಿರ್ದೇಶಕ ಯತಿರಾಜ್​​​​​​​​​​​

ಯತಿರಾಜ್ ಈ ಕಿರುಚಿತ್ರವನ್ನು ಬಹಳ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಸಾವನದುರ್ಗ, ಮಾಗಡಿ ಬಳಿ ಈ ಕಿರುಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ಯತಿರಾಜ್ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದ ಜೊತೆಗೆ ರೈತನ ಪಾತ್ರ ಕೂಡಾ ಮಾಡಿದ್ದಾರೆ. ಯಶಿತ, ನಮಿತಾ, ಚಂದನ, ಭಗತ್ ಸಿಂಗ್ ಕೂಡಾ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ABOUT THE AUTHOR

...view details