ಕರ್ನಾಟಕ

karnataka

ETV Bharat / sitara

ನಾಗಚೈತನ್ಯ ತುಂಬಾ ತಾಳ್ಮೆ ಇರುವ​ ವ್ಯಕ್ತಿ: ನಟಿ ದಕ್ಷಾ ನಗರ್ಕರ್ ಹೊಗಳಿಕೆ

ನಾಗಾರ್ಜುನ ಮತ್ತು ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ ದಕ್ಷಾ ನಗರ್ಕರ್ ಅವರೊಂದಿಗೆ ವಿಶೇಷ ಬಾಂಧವ್ಯದ ಕುರಿತು ಹೇಳಿಕೊಂಡಿದ್ದಾರೆ.

By

Published : Jan 11, 2022, 2:26 PM IST

Daksha Nagarkar
ದಕ್ಷಾ ನಗರ್ಕರ್

ಹೈದರಾಬಾದ್: ನಟಿ ದಕ್ಷಾ ನಗರ್ಕರ್ ಅವರು ತೆಲುಗು ತಾರೆಯರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ನಾಗ ಚೈತನ್ಯ ಅಭಿನಯದ 'ಬಂಗಾರ್ರಾಜು' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ ದಕ್ಷಾ ನಗರ್ಕರ್ ಅವರೊಂದಿಗೆ ವಿಶೇಷ ಬಾಂಧವ್ಯದ ಕುರಿತು ಹೇಳಿದ್ದಾರೆ.

ನಾಗ ಚೈತನ್ಯ ನನ್ನ ಮೊದಲ ಡಾನ್ಸ್​​ ಪಾರ್ಟನರ್​ ಮತ್ತು ಅವರು ತುಂಬಾ ತಾಳ್ಮೆ ಇರುವ ​ ವ್ಯಕ್ತಿ ಎಂದು ತನ್ನ ಸಂಭಾಷಣೆಯಲ್ಲಿ ಹೇಳಿದ್ದಾರೆ. ನಾನು ಹಾಡಿಗೆ ಪೂರ್ವಾಭ್ಯಾಸ ಮಾಡುವಾಗ, ಅವರು ತಾಳ್ಮೆಯಿಂದ ಕಾಯುತ್ತಿದ್ದರು ಎಂದು ಹೇಳಿದ್ದಾರೆ.

ನಾಗಾರ್ಜುನ ಸರ್ ಅವರೊಂದಿಗೆ ನಾನು ಕೆಲವು ಮೋಜಿನ ಸಂಭಾಷಣೆಗಳನ್ನು ನಡೆಸಿದ್ದೇನೆ. ಅವರಿಗೆ ಹಚ್ಚೆಗಳ ಮೇಲಿನ ಪ್ರೀತಿ ಮತ್ತು ಹಾವುಗಳ ಮೇಲಿನ ಮೋಹದ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ದಕ್ಷಾ ನಗರ್ಕರ್ ನೆನಪಿಸಿಕೊಂಡಿದ್ದಾರೆ.

'ಬಂಗಾರ್ರಾಜು' ಸಿನಿಮಾ ಜ. 14 ರಂದು ತೆರೆಗೆ ಬರಲಿದ್ದು, ನಾಗ ಚೈತನ್ಯ, ನಾಗಾರ್ಜುನ, ಕೃತಿ ಶೆಟ್ಟಿ ಮತ್ತು ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಹೃತಿಕ್ ರೋಷನ್ ಮಾಜಿ ಪತ್ನಿಗೆ ಒಮಿಕ್ರಾನ್​​.. ಹಿಂದಿ ಚಿತ್ರರಂಗದ ಮತ್ತಿಬ್ಬರಿಗೆ ಅಂಟಿದ ಕೊರೊನಾ!

ABOUT THE AUTHOR

...view details