ಕರ್ನಾಟಕ

karnataka

By

Published : Oct 28, 2019, 5:24 AM IST

Updated : Oct 28, 2019, 7:08 AM IST

ETV Bharat / sitara

ಎಲಿಮಿನೇಟ್​ ಆದ ಚೈತ್ರಾ ವಾಸುದೇವನ್ ಬಿಗ್​ ಬಾಸ್​ ಬಗ್ಗೆ ಅಚ್ಚರಿ ಹೇಳಿಕೆ

ನಾನೇ ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತ್ತು. ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಎಂದು ಚೈತ್ರಾ ವಾಸುದೇವನ್​ ಹೇಳಿದ್ದಾರೆ.

ಚೈತ್ರಾ ವಾಸುದೇವನ್

ಬಿಗ್ ಬಾಸ್ ಮನೆಯಿಂದ ಹೊರಬರುವ ಮುನ್ನವೇ ಚೈತ್ರಾ ವಾಸುದೇವನ್ ಅವರಿಗೆ ತಾವು ಎಲಿಮಿನೇಟ್ ಆಗ್ತಿನಿ ಅಂತ ಗೊತ್ತಿತಂತೆ. ಅಷ್ಟೇ ಅಲ್ಲ ಮದುವೆ ಆದವರನ್ನು ಶೋಗಳಲ್ಲಿ ಇಟ್ಟು ಕೊಳ್ಳಲ್ಲ ಅನ್ನೋದು ಅವರ ವಾದ.ಎಲಿಮಿನೇಷನ್ ಪ್ರಕ್ರಿಯೆ ನಡೆಸುವ ಮುನ್ನವೇ ಚೈತ್ರ ವಾಸುದೇವನ್ ಅವರು ಬಾತ್ ರೂಮಿನಲ್ಲಿ ಕೂತು ಈ ಬಗ್ಗೆ ಯೋಚಿಸಿದ್ದರಂತೆ.

ತಮ್ಮ ಎರಡು ವಾರಗಳ ಜರ್ನಿಯ ವಿಡಿಯೋ ನೋಡಿದ ಬಳಿಕ ಚೈತ್ರಾ ಎಮೋಷನಲ್ ಆಗಲಿಲ್ಲ. ಹೀಗಾಗಿ, ಸುದೀಪ್ ಇದೇ ಮೊದಲ ಸ್ಪರ್ಧಿ ಈ ರೀತಿ ಎಮೊಷನಲ್ ಆಗದೇ ಇರುವುದು. ನಿಮಗೆ ಕೇವಲ ಮೇಕಪ್ ಬಗ್ಗೆಯೇ ಚಿಂತೆ ಎಂದು ಕಾಲೆಳೆದಿದ್ದಾರೆ.

ಶೋ ನಿಂದ ಹೊರ ಹೋದಮೇಲೆ ಏನು ಮಾಡ್ತೀರಾ ಎಂದು ಕೇಳಿದಾಗ, ಇಂತಹ ದೊಡ್ಡ ವೇದಿಕೆ‌ ಮೇಲೆ ಆಂಕರಿಂಗ್ ಮಾಡುವುದು ನನ್ನ ಕನಸು.‌ ಮತ್ತೆ ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ ಎಂದರು. ಚೈತ್ರ ವಾಸುದೇವನ್ ಕಲರ್ಸ್ ಕನ್ನಡ ಸಿನಿಮಾ ಚಾನಲ್​ನಲ್ಲಿ ‘ಒಂದು ಸಿನಿಮಾ ಕತೆ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದರು.

Last Updated : Oct 28, 2019, 7:08 AM IST

ABOUT THE AUTHOR

...view details