ಕರ್ನಾಟಕ

karnataka

'ಈ ಸಲ ಕಪ್​ ನಮ್ದೇ ಎಂದ ಬಿಗ್​ ಬಾಸ್​ ಸ್ಪರ್ಧಿ'​... ಶಾಕ್​ ನೀಡಿದ ಬಿಗ್​ಬಾಸ್​!

By

Published : Mar 23, 2021, 1:43 AM IST

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಯೋರ್ವ ಈ ಸಲ ಕಪ್​ ನಮ್ದೇ ಎಂದು ಹೇಳಿಕೆ ನೀಡಿದ್ದಕ್ಕಾಗಿ ಆತನಿಗೆ ಶಿಕ್ಷೆ ನೀಡಲಾಗಿದೆ.

manju pavagada
manju pavagada

ಬಿಗ್​ ಬಾಸ್​ 8ರ ಸೀಸನ್​ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ಕೆಲ ಅಭ್ಯರ್ಥಿಗಳು ಬಿಗ್​ಬಾಸ್​ ಮನೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರೆ, ಇನ್ನೂ ಕೆಲವರು ಶಿಕ್ಷೆಗೊಳಗಾಗುತ್ತಿದ್ದಾರೆ. ಇದೀಗ ಈ ಸಲ ಕಪ್​ ನಮ್ದೇ ಎಂದು ಹೇಳಿಕೆ ನೀಡಿರುವ ಮಂಜುಗೆ ಬಿಗ್​ಬಾಸ್​ ಶಿಕ್ಷೆ ನೀಡಿದೆ.

ಏನಿದು ಘಟನೆ: ಕಳೆದ ವಾರ ದಿವ್ಯಾ ಸುರೇಶ್​ ಹಾಗೂ ಮಂಜು ಹರಟೆ ಹೊಡೆಯುತ್ತಿದ್ದಾಗ ಮಂಜು ಕಾಫಿ ಕಪ್​ ಒಡೆದು ಹಾಕಿದ್ದರು. ಕಪ್​ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್​ ಬಾಸ್​. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್​ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಗ್​ಬಾಸ್​​: ಕ್ಯಾಪ್ಟನ್​ ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ನಾಮಿನೇಟ್​!

ಈ ತಪ್ಪಿಗೆ ಮಂಜುಗೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ. ಮಂಜುಗೆ ಚಿಕ್ಕದಾದ ಕಪ್​ವೊಂದನ್ನ​ ನೀಡಲಾಗಿದೆ. ಬಿಗ್​ ಬಾಸ್ ಮುಂದಿನ ಆದೇಶದವರೆಗೂ ಅದರಲ್ಲೇ ನೀರು, ಟೀ-ಕಾಫಿ ಕುಡಿಯೋಕೆ ಬಿಗ್​ ಬಾಸ್​ ಆದೇಶಿಸಿದೆ.

ಜತೆಗೆ ಚಿಕ್ಕ ಕಪ್​ ನೀಡಿದ್ದು ಏಕೆ ಎಂಬುದನ್ನ ಹೇಳಿ ಎಂದು ಬಿಗ್​ಬಾಸ್ ಕೇಳಿದ್ದಕ್ಕೆ ಮಂಜು, ಈ ಸಲ ಆರ್​ಸಿಬಿ ಕಪ್​ ಗೆಲ್ಲಲಿದೆ. ಅದಕ್ಕೆ ಮುಂಚಿತವಾಗಿ ನೀವೂ ನನಗೆ ಕಪ್​ ಕಳಿಸಿದ್ದೀರಿ ಎಂದಿದ್ದಾನೆ. ಆದರೆ ಬಿಗ್​ಬಾಸ್​, ನೀವು ಮನೆಯಲ್ಲಿರುವ ಕಪ್​ ಮುರಿದು ಹಾಕಿದ್ದು, ಅದಕ್ಕಾಗಿ ಇದನ್ನ ನೀಡಲಾಗಿದೆ ಎಂದಿದ್ದಾರೆ.

ABOUT THE AUTHOR

...view details