ಕರ್ನಾಟಕ

karnataka

By

Published : Nov 4, 2019, 12:55 AM IST

ETV Bharat / sitara

ದೊಡ್ಮನೆ ಸದಸ್ಯರಿಗೆ 'ಬಿಗ್'​ ಅಚ್ಚರಿ..! ಮನೆಗೆ ಕಾಲಿಟ್ಟ ಪೃಥ್ವಿ ಯಾರು..?

ಬಿಗ್​ಬಾಸ್​ನಲ್ಲಿ ಮೂರನೇ ವಾರಕ್ಕೆ ವೈಲ್ಡ್​ಕಾರ್ಡ್​ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.

ಆರ್‌ ಜೆ ಪೃಥ್ವಿ

ಬಿಗ್​​ಬಾಸ್ ಸೀಸನ್ - 7 ಆರಂಭವಾಗಿ ಮೂರು ವಾರಗಳು ಕಳೆದಿದೆ. ಪ್ರತಿ ವಾರದಂತೆ ಈ ವಾರವೂ ಎಲಿಮಿನೇಷನ್ ನಡೆದಿದ್ದು ದುನಿಯಾ ರಶ್ಮಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದೇ ವೇಳೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಅಚ್ಚರಿಯೊಂದು ಕಾದಿತ್ತು.

ಬಿಗ್​ಬಾಸ್​ನಲ್ಲಿ ಮೂರನೇ ವಾರಕ್ಕೆ ವೈಲ್ಡ್​ಕಾರ್ಡ್​ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.

ಭಾನುವಾರದ ಸಂಚಿಕೆಯಲ್ಲಿ ವೈಲ್ಡ್​​ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ದೊಡ್ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಇಂದು ಈ ವಾರ ಎಲಿಮಿನೇಟ್ ಆದವರ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಲಿಲ್ಲ. ಬದಲಿಗೆ ವೈಲ್ಡ್‌ ಕಾರ್ಡ್‌ ಮೂಲಕ ಮನೆಯೊಳಗೆ ಬಂದ ಆರ್‌ ಜೆ ಪೃಥ್ವಿ ತಾವು ಮನೆಯೊಳಕ್ಕೆ ಪ್ರವೇಶಿಸಿ, ಜೊತೆಗೆ ತಂದಿದ್ದ ಕವರ್ ತೆರೆದು ಎಲಿಮಿನೇಟ್ ಆದವರ ಹೆಸರನ್ನು ಹೇಳಿದ್ದಾರೆ. ಕವರ್​ನಲ್ಲಿ ದುನಿಯಾ ರಶ್ಮಿ ಹೆಸರಿತ್ತು. ಈ ಮೂಲಕ ರಶ್ಮಿ ಮೂರೇ ವಾರಕ್ಕೆ ಬಿಗ್​ಬಾಸ್ ಪಯಣ ಮುಗಿಸಿದ್ದಾರೆ.

ಫೀವರ್ 104ನಲ್ಲಿ ಆರ್ ಜೆ ಆಗಿ ಕೆಲಸ ನಿರ್ವಹಿಸುತ್ತಿರುವ ಪೃಥ್ವಿ ಕಳೆದ ಹದಿನೈದು ವರುಷಗಳಿಂದ ಈ ವೃತ್ತಿಯಲ್ಲಿದ್ದಾರೆ. ಆರ್ ಜೆ ಆಗಿ ಮೋಡಿ ಮಾಡಿರುವ ಪೃಥ್ವಿಯ ಹೊಸ ಪಯಣ ಅವರ ಕೇಳುಗರಿಗೆ ಮಾತ್ರವಲ್ಲದೆ ದೊಡ್ಮನೆ ಮಂದಿಗೂ ಕುತೂಹಲ ಮೂಡಿಸಿದೆ.

ABOUT THE AUTHOR

...view details