ಕರ್ನಾಟಕ

karnataka

ETV Bharat / sitara

'ಅಗ್ನಿಸಾಕ್ಷಿ'ಯ ಸಿದ್ದಾರ್ಥ್ ಅತ್ತಿಗೆಗೆ ಇರುವ ಆ ದೊಡ್ಡ ಕನಸು ಯಾವುದು ಗೊತ್ತಾ..? - Agnisakshi serial Radhika

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದ ಅನುಷಾ ರಾವ್ ಈಗ ಬೆಳ್ಳಿತೆರೆಯಲ್ಲೂ ನಟಿಸುತ್ತಿದ್ದಾರೆ. ಚಿತ್ರಕಥಾ, ಮನರೂಪ, ನಕ್ಷೆ, ಮಹಾ ಕರ್ಮ ಸಿನಿಮಾಗಳಲ್ಲಿ ನಟಿಸಿರುವ ಅನುಷಾ ಈಗ ಯೋಗರಾಜ್ ಭಟ್ ನಿರ್ದೇಶನದ 'ಪದವಿಪೂರ್ವ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Anusha rao
ಅನುಷಾ ರಾವ್

By

Published : Mar 2, 2021, 3:26 PM IST

ಕಳೆದ ವರ್ಷವಷ್ಟೇ ಅಂತ್ಯವಾಗಿದ್ದ ಕಲರ್ಸ್ ಕನ್ನಡದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಅತ್ತಿಗೆ ರಾಧಿಕಾ ಆಗಿ ಅಭಿನಯಿಸಿದ್ದ ನಟಿ ನಿಮಗೆ ನೆನಪಿರಬಹುದು. ಇವರ ನಿಜ ಹೆಸರು ಅನುಷಾ ರಾವ್. ಈಕೆಯ ಅಭಿನಯಕ್ಕೆ ಮನಸೋಲದವರಿಲ್ಲ. ನಟಿಸಿರುವುದು ಕೆಲವೇ ಧಾರಾವಾಹಿಗಳಲ್ಲಾದರೂ ಅನುಷಾ ರಾವ್ ಕಿರುತೆರೆಪ್ರಿಯರಿಗೆ ಬಹಳ ಪರಿಚಿತರು.

ಕಿರುತೆರೆ ನಟಿ ಅನುಷಾ ರಾವ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದ ಅನುಷಾ ರಾವ್ ಇದೀಗ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಫೇಮಸ್​. ಎಂಎಸ್‌ಸಿ ಸೈಕಾಲಜಿ ಮಾಡಿ ಆಸ್ಪತ್ರೆಯಲ್ಲಿ ಕೌನ್ಸಿಲರ್ ಆಗಿದ್ದ ಅನುಷಾ ರಾವ್ ಆಕಸ್ಮಿಕವಾಗಿ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟರು. ಸಿಂಪಲ್ ಸುನಿ ನಿರ್ದೇಶನದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಅನುಷಾ'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಮಹೇಶನ ಅಮ್ಮನ ಪಾತ್ರಕ್ಕೆ ಆಡಿಷನ್ ನೀಡಿದ್ದರು.‌ ಆದರೆ ಆ ಪಾತ್ರಕ್ಕೆ ಅವರು ಆಯ್ಕೆ ಆಗಲಿಲ್ಲ. ನಂತರ ಅವರು 'ದುರ್ಗಾ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ನಂತರ ಸುಬ್ಬಲಕ್ಷ್ಮಿ ಸಂಸಾರ, ದೊಡ್ಮನೆ ಸೊಸೆ, ಮನೆಯೇ ಮಂತ್ರಾಲಯ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದ್ದರು.

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಹೆಸರಾದ ಅನುಷಾ ರಾವ್

ಇದನ್ನೂ ಓದಿ:ಹೊಸ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ...ಧನ್ಯಾಗೆ ಶುಭ ಕೋರಿದ ಸ್ನೇಹಿತರು

ಅನುಷಾ ರಾವ್​​ಗೆ ಹೆಸರು ತಂದುಕೊಟ್ಟದ್ದು ಮಾತ್ರ ಅಗ್ನಿಸಾಕ್ಷಿಯ ರಾಧಿಕಾ ಪಾತ್ರ. ಇಂದಿಗೂ ಕೂಡಾ ಅನುಷಾ, ರಾಧಿಕಾ ಹೆಸರಿಂದಲೇ ಚಿರಪರಿಚಿತ. ಕನ್ನಡದ ಜೊತೆಗೆ ತೆಲುಗು ಧಾರಾವಾಹಿಯಲ್ಲೂ ನಟಿಸಿರುವ ಈಕೆ ಸಿನಿರಂಗಕ್ಕೂ ಕಾಲಿಟ್ಟಾಗಿದೆ. ಚಿತ್ರಕಥಾ, ಮನರೂಪ, ನಕ್ಷೆ, ಮಹಾ ಕರ್ಮ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅನುಷಾ ರಾವ್, 'ಮನರೂಪ' ಸಿನಿಮಾಗೆ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ಇದೀಗ ಯೋಗರಾಜ್ ಭಟ್ ನಿರ್ದೇಶನದ 'ಪದವಿಪೂರ್ವ' ಸಿನಿಮಾದಲ್ಲಿ ನಟಿಸುತ್ತಿರುವ ಅನುಷಾ ರಾವ್​ಗೆ ಸಿನಿಮಾಗಳಲ್ಲಿ ಖಳನಾಯಕಿಯಾಗಿ ಕೂಡಾ ನಟಿಸಬೇಕು ಎಂಬ ಮಹದಾಸೆ ಇದೆಯಂತೆ.

ABOUT THE AUTHOR

...view details