ವಾಹಿನಿಗಳು ಎಷ್ಟು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೂ ಹಣ ನೀಡುವ ಕಾರ್ಯಕ್ರಮಗಳನ್ನು ಮಾಡಿದರೆ ಅದನ್ನು ನೋಡುವ ಆಸಕ್ತಿಯೇ ಬೇರೆ. ಅದಕ್ಕೆ 'ಕನ್ನಡದ ಕೋಟ್ಯಧಿಪತಿ ' ಕಾರ್ಯಕ್ರಮವೇ ಸಾಕ್ಷಿ. ಹಣ ಗೆಲ್ಲುವ ಅವಕಾಶ ಇದೆ ಎಂದರೆ ಯಾರು ತಾನೇ ಬಿಡುತ್ತಾರೆ..?
ಇದೀಗ ಉದಯ ಟಿವಿಯಲ್ಲಿ 'ಆನ್ಸರ್ ಹೇಳಿ ಕ್ಯಾಶ್ ಗೆಲ್ಲಿ' ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇದಕ್ಕೆ ಪ್ರೇಕ್ಷಕರು ಮನೆಯಲ್ಲೇ ಇದ್ದು ಪ್ರಶ್ನೆಗಳಿಗೆ ಉತ್ತರಿಸಿ ದುಡ್ಡು ಪಡೆಯಬಹುದು. ಪ್ರತಿ ಭಾನುವಾರ ಈ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಗುತ್ತದೆ. ಇದಕ್ಕೆ ವೀಕ್ಷಕರು ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ನೋಡಬೇಕು. ಈ ಧಾರಾವಾಹಿ ಪ್ರಸಾರದ ನಡುವೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.