ಕರ್ನಾಟಕ

karnataka

ETV Bharat / sitara

ಮಾಡದ ತಪ್ಪಿಗೆ ಬೆಲೆ ತೆತ್ತ 'ನಟಸಾರ್ವಭೌಮ'ನ ಚೆಲುವೆ! - ಅನುಪಮಾ

ಅನುಪಮಾ ಸೌಥ್ ಫಿಲ್ಮಂ ಇಂಡಸ್ಟ್ರಿಗೆ ಪರಿಚಿತ ನಟಿ. ಮಲೆಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಚಿತ್ರದಲ್ಲಿಯೂ ಇವರು ನಟಿಸಿದ್ದಾರೆ. ಅಪ್ಪು ಜತೆ ನಟಸಾರ್ವಭೌಮ ಚಿತ್ರದಲ್ಲಿ ಶೃತಿ ಪಾತ್ರ ನಿಭಾಯಿಸಿದ್ದರು ಈ ಚೆಲುವೆ.

ಅನುಪಮಾ ಪರಮೇಶ್ವರನ್

By

Published : Apr 10, 2019, 1:53 PM IST

Updated : Apr 10, 2019, 4:09 PM IST

ಕೆಲವೊಂದು ಬಾರಿ ಸೋಷಿಯಲ್ ಮೀಡಿಯಾಗಳು ಕೆಲವೊಂದು ಅದ್ವಾನಗಳಿಗೆ ಕಾರಣವಾಗುತ್ತವೆ. ಯಾರನ್ನೋ ಟೀಕಿಸಲು ಹೋಗಿ ಮತ್ತ್ಯಾರದೋ ಮೇಲೆ ದಾಳಿ ಮಾಡುವ ವಿಚಿತ್ರ ಪ್ರಸಂಗಗಳು ನಡೆದು ಬಿಡುತ್ತವೆ. ಇದೀಗ ಮಲೆಯಾಳಿ ಚೆಲುವೆ ಅನುಪಮಾ ಪರಮೇಶ್ವರನ್​ ಇಂತಹ ಘಳಿಗೆ ಎದುರಿಸಿದ್ದಾರೆ.

ಹೌದು, ಪ್ರೇಮಂ ಬ್ಯೂಟಿ ಅನುಪಮಾ ಮಾಡದ ತಪ್ಪಿಗೆ ಬೆಲೆ ತೆರಬೇಕಾಗಿದೆ. ಇವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಕಾಮೆಂಟ್​​ಗಳ ಸುರಿಮಳೆಯಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ನಟಸಾರ್ವಭೌಮನ ಚೆಲುವೆ ಶಿಕ್ಷೆ ಅನುಭವಿಸುವಂತಾಗಿದೆ.

ಅಷ್ಟಕ್ಕೂ ಆಗಿದ್ದೇನು ?

ದೇಶದಲ್ಲಿ ಲೋಕಸಭೆಯ ಚುನಾವಣೆಯ ಕಾವು ಜೋರಾಗಿದೆ. ಇತ್ತ ದೇವರನಾಡು ಕೇರಳದಲ್ಲಿಯೂ ಈ ಬಾರಿ ಚುನಾವಣೆಯ ರಣಕಣ ರಂಗೇರಿದೆ. ಪಕ್ಷದ ಅಭ್ಯರ್ಥಿಗಳು ಮತಬೇಟೆ ಕಾರ್ಯ ಚುರುಕುಗೊಳಿಸಿದ್ದಾರೆ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಶಬರಿ ಮಲೆ ಅಯ್ಯಪ್ಪನ ಹೆಸರು ಹೇಳಿ ಮತ ಕೇಳುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ತ್ರಿಶ್ಯೂರ್​ ಜಿಲ್ಲಾಧಿಕಾರಿ ಟಿ.ವಿ ಅನುಪಮಾ, ಸುರೇಶ್​ಗೆ ಶೋಕಾಸ್ ನೋಟಿಸ್​ ನೀಡಿದ್ದಾರೆ. ಇದು ಈತನ ಬೆಂಬಲಿಗರನ್ನು ಕೆರಳಿಸಿದೆ.

ಜಿಲ್ಲಾಧಿಕಾರಿಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದಾಳಿ ನಡೆಸಿರುವ ಸುರೇಶ್ ಬೆಂಬಲಿಗರು, ತಪ್ಪಾಗಿ ನಟಿ ಅನುಪಮಾ ಫೇಸ್​ಬುಕ್​ ಪೇಜ್​ನಲ್ಲಿ ದಾಳಿ ಮಾಡಿದ್ದಾರೆ. ಜಿಲ್ಲಾಧಿಕಾರಿಗೂ ನಟಿಗೂ ವ್ಯತ್ಯಾಸ ಕಂಡುಕೊಳ್ಳದ ನೆಟ್ಟಿಜನ್​ಗಳು, ಅನುಪಮಾ ಅವರ ಹೊಸ ಚಿತ್ರ 'ರಾಕ್ಷಸಡು' ಪೋಸ್ಟರ್​ ಕೆಳಗೆ ಟೀಕೆಗಳ ಸುರಿಮಳೆಗೈದಿದ್ದಾರೆ.

Last Updated : Apr 10, 2019, 4:09 PM IST

ABOUT THE AUTHOR

...view details