ಚಿತ್ರ : ದಮಯಂತಿ,
ನಿರ್ಮಾಪಕರು : ನವರಸನ್
ಛಾಯಾಗ್ರಹಣ : ಪಿ ಕೆ ಎಚ್ ದಾಸ್,
ಸಂಗೀತ : ಆರ್ ಎಸ್ ಗಣೇಶ್ ನಾರಾಯಣ್,
ಇತ್ತೀಚಿಗೆ ಬಿಡುಗಡೆಯಾದ ‘ಮನೆ ಮಾರಾಟ್ಟಕ್ಕಿದೆ’ ಹಾಗೂ ಈ ‘ದಮಯಂತಿ’ ಚಿತ್ರಕ್ಕೂ ಬೇಜಾನ್ ಹೋಲಿಕೆ ಇದೆ. ಈ ಎರಡು ಚಿತ್ರಕ್ಕೆ ‘ಆನಂದೋ ಬ್ರಹ್ಮ’ (2017 ತೆಲುಗು ಸಿನಿಮಾ) ಸ್ಪೂರ್ತಿ ಆಗಿದೆ. ‘ಮನೆ ಮಾರಾಟ್ಟಕ್ಕಿದೆ’ ರೀಮೇಕ್ ಎಂದು ಹೇಳಿ ಮಾಡಿದ್ದರು ನಿರ್ಮಾಪಕ ಎಸ್ ವಿ ಬಾಬು ಹಾಗೂ ನಿರ್ದೇಶಕ ಮಂಜು ಸ್ವರಾಜ್. ಆದರೆ ನವರಸನ್ ಹೇಳದೆ ಸ್ಪೂರ್ತಿ ಪಡೆದಿದ್ದಾರೆ. ರೀಮೇಕ್ ಮಾಡುವಾಗ ಬದಲಾವಣೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ.
ಇಷ್ಟಾದರೂ ‘ದಮಯಂತಿ’ ಮೊದಲಾರ್ಧ ಪ್ರೇಕ್ಷಕ ನೀಡಿದ ಹಣಕ್ಕೆ ಒಳ್ಳೆಯ ಮನರಂಜನೆ ಸಿಕ್ಕಿ ಬಿಡುತ್ತದೆ. ಇನ್ನುಳಿದ ಭಾಗ ಸೇಡಿನ ಕಥೆ. ಪ್ರೇಕ್ಷಕ ಎಣಿಕೆ ಹಾಕಿದ್ದೆ ದ್ವಿತೀಯ ಭಾಗದಲ್ಲಿ ಸಂಭವಿಸುತ್ತದೆ. ರಾಧಿಕಾ ಕುಮಾರಸ್ವಾಮಿ ಎರಡು ಅವತಾರ ಎತ್ತಿದ್ದಾರೆ. ರುದ್ರ ರೂಪದಲ್ಲಿ ಅವರು ಹೆಚ್ಚು ಪರಾಕ್ರಮ ತೋರಿದ್ದಾರೆ.
ಒಂದು ದೊಡ್ಡ ಬಂಗಲೆ ಇದೆ. ಅದನ್ನು ದೆವ್ವದ ಕಾಟ ಎಂದು ಯಾರು ಕೊಳ್ಳುತ್ತಿಲ್ಲ. ಇದಕ್ಕೆ ವಾರಸ್ದಾರ ಒಂದು ಯೋಜನೆ ಬಿಗ್ ಬಾಸ್ ರೀತಿಯಲ್ಲಿ ರೂಪಿಸುತ್ತಾನೆ. 10 ಲಕ್ಷ ಗೆದ್ದವರಿಗೆ ಬಹುಮಾನ. ಈ ಆಟದಿಂದ ಎಲ್ಲರಿಗೆ ಇಲ್ಲಿ ದೆವ್ವ ಇಲ್ಲ ಎಂದು ಹೇಳುವುದು. ಆಮೇಲೆ ಮನೆ ಮಾರಾಟ ಮಾಡಿಕೊಳ್ಳುವುದು.
ಈ ಬಂಗಲೆಗೆ ಆಟಕ್ಕೆ ಬರುವವರು ಡಿಡಿ ಬಾಸ್ ಹೆಸರಿನಲ್ಲಿ ತಬಲಾ ನಾಣಿ, ಪವನ್, ಗಿರಿ, ಮಿತ್ರ ಹಾಗೂ ಇಬ್ಬರು ಹುಡುಗಿಯರು. ಇಲ್ಲಿ ಪ್ರತಿಯೊಬ್ಬರಿಗೂ ಟಾಸ್ಕ್ ಇದೆ. ಅದನ್ನು ನಿರ್ವಹಿಸುವುದು ಅವರ ಕೆಲಸ. ಆ ಆರು ಜನರಿಗೆ ವಿವಿದ ಕಾರಣಗಳಿಗೆ ದುಡ್ಡು ಬೇಕಾಗಿದೆ. ಚಿತ್ರದ ಮೊದಲಾರ್ಧ ನಾಲ್ಕು ದಿವಸಗಳ ಆಟದಲ್ಲಿ ಕಳೆಯುವುದು. ಈ ಟಾಸ್ಕ್ ನಿರ್ವಹಣೆ ವಿಚಾರವೆ ಮಜಾ ಕೊಡುವ ವಿಚಾರ ಸಹ. ಈ ಬಂಗಲೆಯಲ್ಲಿ ಒಂದು ಕೋಣೆ ಇದೆ. ಅದನ್ನು ಯಾರು ಓಪನ್ ಮಾಡುವಂತಿಲ್ಲ. ಆದರೆ ಕೂಡಿದ ಮತ್ತಿನಲ್ಲಿ ತಬಲ ನಾಣಿ (ಭಟ್ಟನ ಪಾತ್ರದಾರಿ) ಬಾಗಿಲು ಒಡೆಯುವುದು ಅವಾಂತರಕ್ಕೆ ಕಾರಣ ಆಗುತ್ತದೆ.