ಕರ್ನಾಟಕ

karnataka

ETV Bharat / sitara

ಕಣ್ಣೀರು ಹಾಕಿದ ಪ್ರಶಾಂತ್ ಸಂಬರಗಿ, ಸಮಾಧಾನಪಡಿಸಿದ ವೈಷ್ಣವಿ: ಕಾರಣ ? - Bigg Boss house

ರೂಮಿನೊಳಗೆ ಹೋಗಿ ಪ್ರಶಾಂತ್ ಕಣ್ಣೀರು ಹಾಕಿದರು.‌ ಆ ವೇಳೆ ಬಂದ ವೈಷ್ಣವಿ, ಯಾರು ಏನೇ ಹೇಳಿದರು ನಿಮ್ಮ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ ಎಂದ ವೈಷ್ಣವಿ, ಪ್ರಶಾಂತ್ ಅವರನ್ನು ಸಮಾಧಾನಪಡಿಸಿದ್ದಾರೆ.

 chakravarthy outrage against prashant sambargi in Bigg Boss house
chakravarthy outrage against prashant sambargi in Bigg Boss house

By

Published : Jul 9, 2021, 2:08 AM IST

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ನ ಆರಂಭದಲ್ಲಿ ಹೊತ್ತಿಕೊಂಡ ಬೆಂಕಿ ಇನ್ನೂ ಆರಿಲ್ಲ. ಮನೆಯಲ್ಲಿ ತುಂಬಾ ಆತ್ಮೀಯರಾಗಿದ್ದ ಪ್ರಶಾಂತ್ ಹಾಗೂ ಚಕ್ರವರ್ತಿ ದಿನೇ‌ದಿನೇ ಜಗಳವಾಡಿಕೊಳ್ಳುತ್ತಲೇ‌ ಇದ್ದಾರೆ.

ವೈಷ್ಣವಿ ಅವರಿಗೆ ಪ್ರಶಾಂತ್​ ನೀಡಿದ ಸಲಹೆಯನ್ನು ಸ್ವೀಕರಿಸಲಿಲ್ಲ ಎಂಬ ಚಕ್ರವರ್ತಿ ಅವರ ಮಾತಿಗೆ ಮನೆಯಲ್ಲಿ ದೊಡ್ಡ ಮಾತಿನ ಚಕಮಕಿ ನಡೆದಿದೆ. ಕ್ಯಾಪ್ಟನ್ಸಿಗಾಗಿ ನಡೆಯುತ್ತಿರುವ ಟಾಸ್ಕ್ ನಲ್ಲಿ ವೈಷ್ಣವಿಗೆ ಸಹಕಾರ ನೀಡಲು ಪ್ರಶಾಂತ್ ಒಪ್ಪಿದ್ದಾರೆ. ಹೀಗಾಗಿ, ಟಾಸ್ಕ್ ಸಂದರ್ಭದಲ್ಲಿ ವೈಷ್ಣವಿ ಅವರಿಗೆ ಪ್ರಶಾಂತ್ ಸಲಹೆಯೊಂದನ್ನು ನೀಡಿದ್ದಾರೆ. ಆ ಸಲಹೆಯನ್ನು ವೈಷ್ಣವಿ ಬಳಸದೇ ತಮಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ.

ಈ ವಿಷಯವನ್ನು ಚಕ್ರವರ್ತಿ ಪ್ರಶಾಂತ್ ಅವರಿಗೆ ಹೇಳಿ ಈ ಬಗ್ಗೆ ವೈಷ್ಣವಿ ಅವರೊಂದಿಗೆ ಚರ್ಚಿಸಬೇಡ ಎಂದಿದ್ದಾರೆ. ಆದರೆ, ಪ್ರಶಾಂತ್ ವೈಷ್ಣವಿ ಬಳಿ ಈ ಬಗ್ಗೆ ಕ್ಲಾರಿಟಿ ಪಡೆದುಕೊಂಡಿದ್ದಾರೆ.ಈ ಮಧ್ಯೆ, ಈ ವಿಷಯದ ಬಗ್ಗೆ ಮಾತನಾಡಬೇಡ ಎಂದಿದ್ದರೂ ವೈಷ್ಣವಿ ಬಳಿ ಕೇಳಿದ್ದೀಯಾ? ನೀನು ಸ್ನೇಹಿತನಲ್ಲ. ನಾನು ತಂದೆ ತಾಯಿಗೆ ಹುಟ್ಟಿದವನು ಎಂದೆಲ್ಲಾ ಚಕ್ರವರ್ತಿ ಬೈದರು.

ನಂತರ ಚಕ್ರವರ್ತಿ ಅವರ ಮಾತು ಕೇಳಿಸಿಕೊಂಡು ರೂಮಿನೊಳಗೆ ಹೋಗಿ ಪ್ರಶಾಂತ್ ಕಣ್ಣೀರು ಹಾಕಿದರು.‌ ಆ ವೇಳೆ ಬಂದ ವೈಷ್ಣವಿ ನಾನು ಯಾರ ಬಗ್ಗೆಯೂ ಹಿಂದೆ ಮಾತನಾಡುವುದಿಲ್ಲ. ರೇಗಿಸುವುದಿದ್ದರೂ ಅವರ ಮುಂದೆಯೇ ರೇಗಿಸುತ್ತೇನೆ. ಈ ವಿಷಯವನ್ನು ಚಕ್ರವರ್ತಿ ಅವರೇ ಕೆದಕಿದ್ದು. ಯಾರು ಏನೇ ಹೇಳಿದರು ನಿಮ್ಮ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ ಎಂದ ವೈಷ್ಣವಿ, ಪ್ರಶಾಂತ್ ಅವರನ್ನು ಸಮಾಧಾನಪಡಿಸಿದರು.

ABOUT THE AUTHOR

...view details