ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತೊ ಇಲ್ವೋ ಗೊತ್ತಿಲ್ಲ. ಆದ್ರೆ ಸಿನಿಮಾಗಳ ಟೈಟಲ್ ಮಾತ್ರ ಸೌಂಡ್ ಮಾಡುತ್ತವೆ. ಇದೀಗ ಗಾಂಧಿನಗರದಲ್ಲಿ ಸವರ್ಣದೀರ್ಘ ಸಂಧಿ ಸಿನಿಮಾ ಹಲವಾರು ವಿಷಯಗಳಿಗೆ ಗಮನ ಸೆಳೆಯುತ್ತಿದೆ. ಟ್ರೈಲರ್ ಹಾಗೂ ಹಾಡುಗಳಿಂದ ಸದ್ದು ಮಾಡ್ತಿರೋ ಸವರ್ಣದೀರ್ಘ ಸಂಧಿ ಸಿನಿಮಾ ಆಡಿಯೋವನ್ನ ವಿಕಟ ಕವಿ ಯೋಗರಾಜ್ ಭಟ್ ಹಾಗೂ ಮೆಲೋಡಿ ಹಾಡುಗಳ ಸಾಹಿತಿ ಜಯಂತ್ ಕಾಯ್ಕಿಣಿ ಚಿತ್ರತಂಡದ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಯೋಗರಾಜ್ ಭಟ್, ಈ ಚಿತ್ರದ ಹಾಡುಗಳು ಹಾಗೂ ನಿರ್ದೇಶಕ ಕಮ್ ನಟ ವೀರೇಂದ್ರ ಶೆಟ್ಟಿಗೆ ಇರುವ ಕನ್ನಡದ ವ್ಯಾಮೋಹದ ಬಗ್ಗೆ ಕೊಂಡಾಡಿದ್ರು. ಹಾಗೇ ಹಲವು ದಿನಗಳ ನಂತ್ರ ಜಯಂತ್ ಕಾಯ್ಕಿಣಿ ಮತ್ತು ಮನೋಮೂರ್ತಿ ಜೊತೆ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು ಹೆಮ್ಮೆ ಅಂತಾ ಯೋಗರಾಜ್ ಭಟ್ ಹೇಳಿದ್ರು. ಚಾಲಿ ಪೊಲೀಲು ಎಂಬ ತುಳು ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ವೀರೇಂದ್ರ ಶೆಟ್ಟಿ ಈ ಸಿನಿಮಾವನ್ನ ನಿರ್ದೇಶನ ಮಾಡಿ ಅಭಿನಯಿಸಿದ್ದಾರೆ.