ಕರ್ನಾಟಕ

karnataka

ETV Bharat / sitara

'ಪಂಚತಂತ್ರ' ನಂತ್ರ ಮತ್ತೊಂದು ಚಿತ್ರಕ್ಕೆ ಗ್ರೀನ್​​​​​​ ಸಿಗ್ನಲ್​​​​​​​ ಕೊಟ್ಟ ವಿಹಾನ್​​​ ಗೌಡ - ವಿಹಾನ್ ಗೌಡ ಮತ್ತೊಂದು ಸಿನಿಮಾ

ಪಂಚತಂತ್ರ ಸಿನಿಮಾ ಮೂಲಕ ಕರ್ನಾಟದಲ್ಲಿ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ.

vihan gowda next in subhash chandra direction
ಮತ್ತೊಂದು ಚಿತ್ರಕ್ಕೆ ಗ್ರೀನ್​​ ಸಿಗ್ನಲ್​​​ ಕೊಟ್ಟ ವಿಹಾನ್ ಗೌಡ

By

Published : Dec 10, 2019, 10:12 AM IST

ಯೋಗರಾಜ್​ ಭಟ್​​ ನಿರ್ದೇಶನದಲ್ಲಿ ಮೂಡಿಬಂದ ಪಂಚತಂತ್ರ ಸಿನಿಮಾ ಮೂಲಕ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ವಿಹಾನ್​ ಗೌಡ ನಟಿಸುತ್ತಿರುವ ಈ ಚಿತ್ರಕ್ಕೆ ಹೆಸರು ಇನ್ನೂ ನಿರ್ಧಾರವಾಗಿಲ್ಲ.

ನಿರ್ದೇಶಕ ಸುಭಾಷ್ ಚಂದ್ರ, ದರ್ಶನ್ ಅವರ ಆಫೀಸಿಯಲ್ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಆಸಕ್ತಿ ಹಾಗೂ ಶ್ರದ್ಧೆ ಗಮನಿಸಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಕೆಲಸ ಮಾಡಲು ದರ್ಶನ್​​ ಅವಕಾಶ ಕಲ್ಪಿಸಿದ್ದರು.

ಈ ಸಿನಿಮಾ ಶೂಟಿಂಗ್​​​ ಮುಂಬರುವ ಜನವರಿಯಿಂದ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದಲ್ಲಿ ಶೂಟಿಂಗ್​ ಮಾಡಲಾಗುತ್ತದೆಯಂತೆ.

ಈ ಸಿನಿಮಾ 1990ರಿಂದ 2019ರ ಸಮಯದಲ್ಲಿ ಬರಹಗಾರನೊಬ್ಬನ ಜೀವನದ ಕಥೆಯನ್ನು ಹೇಳುತ್ತದೆಯಂತೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಹಾಯಕ, ಸುರೇಶ್ ರಾಜ್ ಸಂಗೀತ ನೀಡುತ್ತಿದ್ದು, ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಲಿದ್ದಾರೆ.

ABOUT THE AUTHOR

...view details