ಯುವ ನಿರ್ದೇಶಕ ರಘು ವರ್ಮಾ ತಮ್ಮ ಮೂರನೇ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇಂದು ಕನಕಪುರ ರಸ್ತೆ ಬಳಿ ಇರುವ ತ್ರಿಮೂರ್ತಿ ದೇವಸ್ಥಾನದ ಬಳಿ ‘ವಿಧಿಬರಹ’ ಚಿತ್ರದ ಮುಹೂರ್ತ ನಡೆದಿದೆ.
ರಘು ವರ್ಮಾ ಮೂಲತಃ ಕನಕಪುರದವರು. ಇವರು ನಿರ್ದೇಶಕರುಗಳಾದ ಕುಮಾರ್, ಆರ್.ಚಂದ್ರು, ಎಂ.ಡಿ.ಶ್ರೀಧರ್ ಮತ್ತು ಪ್ರೀತಂ ಗುಬ್ಬಿ ಬಳಿ ಸಹಾಯಕರಾಗಿ ಅನುಭವ ಪಡೆದು ಈಗಾಗಲೇ ದೌಲತ್ ಹಾಗೂ ತ್ಯಾಗಮಾಯಿ ಸಿನಿಮಾಗಳನ್ನು ಪೂರ್ತಿಗೊಳಿಸಿದ್ದಾರೆ. ಅವೆರಡು ಸಿನಿಮಾಗಳು ಬಿಡುಗಡೆಯಾಗಿಲ್ಲ. ಆಗಲೇ ಇವರ ಮೂರನೇ ಸಿನಿಮಾ ‘ವಿಧಿಬರಹ’ವು ದೀಪ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಶೀರ್ಷಿಕೆ ಕೆಳಗೆ ‘ಯಾರ್ಯಾರ ಹಣೆಲಿ ಏನೇನ್ ಬರೆದಿದ್ಯೋ... ಎಂದು ಹೇಳಲಾಗಿದೆ.