ಕರ್ನಾಟಕ

karnataka

By

Published : Jul 17, 2021, 1:37 PM IST

ETV Bharat / sitara

ದೊಡ್ಮನೆಯವರ ಆಸ್ತಿಯನ್ನು ನಟ ದರ್ಶನ್​ಗೆ ಕೊಡಲಿಲ್ಲ: ಉಮಾಪತಿ ಸ್ಪಷ್ಟನೆ

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಆ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದು, ಅದನ್ನು ದರ್ಶನ್​ಗೆ ನೀಡಲು ಉಮಾಪತಿ ನಿರಾಕರಿಸಿದ್ದರು. ಆದರೆ ಈ ವಿಚಾರದಲ್ಲಿ ಯಾವ ಮನಸ್ಥಾಪವೂ ಆಗಿರಲಿಲ್ಲ ಅಂತಾ ಉಮಾಪತಿ ಸ್ಪಷ್ಟಪಡಿಸಿದ್ದಾರೆ .

Producer Umapati
ನಿರ್ಮಾಪಕ ಉಮಾಪತಿ

ನಟ ಪುನೀತ್ ರಾಜ್ ಕುಮಾರ್ ಹಾಗೂ ಅವರ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಹೆಸರಿನಲ್ಲಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಬಿಗ್ರೇಡ್ ರೋಡ್​ನಲ್ಲಿರುವ ರೆಸಿಡೆನ್ಸಿ ಹೋಟೆಲ್​ ಬಳಿ ರಾಘವೇಂದ್ರ ರಾಜ್​ ಕುಮಾರ್ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಬಿಲ್ಡಿಂಗ್ ಹೊಂದಿದ್ದರು. ಈ ಬಿಲ್ಡಿಂಗ್ ಅನ್ನು ನಾನು ಖರೀದಿಸಿದ್ದೆ ಎಂದು ಸ್ವತಃ ಉಮಾಪತಿ ತಿಳಿಸಿದ್ದು, ಈ ವ್ಯವಹಾರದಲ್ಲಿ ಯಾರೊಂದಿಗೂ ಯಾವುದೇ ತೊಂದರೆ, ಮನಸ್ತಾಪಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .

ನಿರ್ಮಾಪಕ ಉಮಾಪತಿ

ಉಮಾಪತಿ ಬಳಿ ಇದ್ದ ಆಸ್ತಿ ಖರೀದಿಸಲು ದರ್ಶನ್ ಮುಂದಾಗಿದ್ದರು. ಆದರೆ, ಅದನ್ನು ದರ್ಶನ್​ಗೆ ನೀಡಲು ನಿರಾಕರಿಸಿದ್ದರು. ಅದು ದೊಡ್ಮನೆ(ರಾಜ್​ಕುಮಾರ್ ಕುಟುಂಬ) ಆಸ್ತಿಯಾಗಿದ್ದು, ದರ್ಶನ್​ಗೆ ಮಾರಿದ್ರೆ ಬೇರೆ ಆಯಾಮ ಪಡೆದುಕೊಳ್ಳುವ ಭೀತಿಯಿಂದ, ಆಸ್ತಿಯನ್ನ ಕೊಟ್ಟಿರಲಿಲ್ಲ ಅಂತ ಉಮಾಪತಿ ತಿಳಿಸಿದ್ದಾರೆ. ಇನ್ನು ನಟ ದರ್ಶನ್ ಕೋಪ ಮಾಡಿಕೊಂಡಿದ್ದರೂ ಅಂತಾನೂ ಅನ್ನಿಸಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಸಂದೇಶ್ ಆಡಿಯೋ ವಿಚಾರ ಸತ್ಯಕ್ಕೆ ದೂರ: ಹರ್ಷ ಮೆಲಂಟಾ

ದೊಡ್ಮನೆಯವ್ರ ಆಸ್ತಿ ಕೊಟ್ರೆ ಸರಿ ಹೋಗಲ್ಲ ಎಂದು ನನಗೆ ಅನಿಸಿತ್ತು. ಈ ವಿಚಾರದಲ್ಲಿ ಪುನೀತ್ ಅವರನ್ನು ಎಳೆದು ತರಬೇಡಿ. ‌ನನ್ನ ಮತ್ತು ಪುನೀತ್ ನಡುವೆ ವ್ಯವಹಾರ ನಡೆದಿದೆ. ನಾನು ದುಡ್ಡು ಕೊಟ್ಟು ಅವ್ರ ಬಳಿ ಆಸ್ತಿ ಖರೀದಿಸಿದ್ದೇನೆ. ದರ್ಶನ್ ಅವರಿಗೆ ಮಾರಿದ್ರೂ ದುಡ್ಡು ತಗೊಂಡೇ ಮಾರುತ್ತಿದ್ದೆ. ಆ ಆಸ್ತಿಗೆ ಪರ್ಯಾಯವಾಗಿ ಬೇರೆ ಆಸ್ತಿ ನೀಡುವುದಾಗಿ ಹೇಳಿದ್ದೆ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ABOUT THE AUTHOR

...view details