ಕರ್ನಾಟಕ

karnataka

ETV Bharat / sitara

ಗಲ್ಲಾ ಪೆಟ್ಟಿಗೆಯಲ್ಲಿ ಅಬ್ಬರಿಸದ 'ಉದ್ಘರ್ಷ'... ದೇಸಾಯಿಗೆ ಧೈರ್ಯ ತುಂಬಿದ ನಿರ್ಮಾಪಕ - undefined

ಸಸ್ಪೆನ್ಸ್ ಚಿತ್ರಗಳ ಮಾಸ್ಟರ್ ಸುನಿಲ್ ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಘರ್ಜಿಸಿಲ್ಲ. ಆದ್ರೆ ಚಿತ್ರದ ನಿರ್ಮಾಪಕರೇ ನಿರ್ದೇಶಕ ದೇಸಾಯಿಗೆ ಧೈರ್ಯ ತುಂಬಿದ್ದಾರೆ.

ಉದ್ಘರ್ಷ

By

Published : Mar 28, 2019, 3:16 PM IST

ಒಂದೇ ವಾರಕ್ಕೆ ಸಂತೋಷ್ ಚಿತ್ರಮಂದಿರದಿಂದ ಉದ್ಘರ್ಷವನ್ನು ಎತ್ತಂಗಡಿ ಮಾಡಲಾಗಿದೆ. ಆದರೆ, 14 ಕೋಟಿ ರೂ. ವೆಚ್ಚ ಮಾಡಿದ ನಾಲ್ಕು ಭಾಷೆಗಳಲ್ಲಿ ತಯಾರಿಸಿದ ನಿರ್ಮಾಪಕ ದೇವರಾಜ್ ಆರ್, ಅವರಿಗೆ ಹಾಕಿದ ಹಣ ವಾಪಸ್​​​ ಬರುವುದು ಖಾತ್ರಿ ಇದೆಯಂತೆ.

ಕನ್ನಡ ‘ಉದ್ಘರ್ಷ’ ಚಿತ್ರವನ್ನೂ ತೆಲುಗು ಭಾಷೆಯ ಜೊತೆಗೆ ಮರು ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ ನಿರ್ಮಾಪಕ ದೇವರಾಜ್​. ಎಪ್ರಿಲ್ ನಂತರ ತೆಲುಗು ಆವತರಣೆಯ ಚಿತ್ರ ಬಿಡುಗಡೆಯಾಗಲಿದೆ. ಇದರ ಜೊತೆಗೆ ಸ್ವಲ್ಪ ಎಡಿಟ್ ಮಾಡಿದ ಕನ್ನಡ ಭಾಷೆಯ ಚಿತ್ರವನ್ನೂ ಬಿಡುಗಡೆ ಮಾಡಲಾಗುವುದು. ತೆಲುಗು ಆವತರಣೆಕೆಗೆ ಅಲ್ಲಿಯ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಗುವುದು ಸ್ವಲ್ಪ ತಡವಾಗಿತ್ತು. ಈ ಕಾರಣ ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗಲಿದೆಯಂತೆ.

ಡಿಜಿಟಲ್ ಮತ್ತು ಟಿವಿ ರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ದೇವರಾಜ್ ದೊಡ್ಡ ಮೊತ್ತ ನಿರೀಕ್ಷಿಸುತ್ತಿದ್ದಾರೆ. ಈ ಹಣ ಚಿತ್ರದ ಬಹುತೇಕ ವೆಚ್ಚವನ್ನು ಕವರ್ ಮಾಡುವುದಾಗಿ ಅವರು ನಂಬಿದ್ದಾರೆ.

ಇನ್ನು ಚಿತ್ರ ಸೋತಿದ್ದಕ್ಕೆ ಸುನಿಲ್ ಕುಮಾರ್ ದೇಸಾಯಿ ಅವರಿಗೆ ನಿರ್ಮಾಪಕರೇ ಧೈರ್ಯ ಹೇಳಿದ್ದಾರೆ. ಇಷ್ಟೊಂದು ಕಷ್ಟಪಟ್ಟು ಮಾಡಿರುವ ಸಿನಿಮಾ. ಜನರು ಈ ಕ್ಷಣದಲ್ಲಿ ಸ್ವೀಕಾರ ಮಾಡದಿರಬಹುದು. ಅದನ್ನು ಮುಂದೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಿರ್ಮಾಪಕ ದೇವರಾಜ್ ಅವರದು.

ಕನ್ನಡದ ಚಿತ್ರಕ್ಕೆ ‘ಎ’ ಅರ್ಹತಾ ಪತ್ರ ಸಿಕ್ಕಿದ್ದರಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್​​ಗಳಲ್ಲಿ ಸ್ವಲ್ಪ ತೊಂದರೆಯಾಗಿರುವುದನ್ನು ನಿರ್ಮಾಪಕರು ಒಪ್ಪಿಕೊಳ್ಳುತ್ತಾರೆ.

For All Latest Updates

TAGGED:

ABOUT THE AUTHOR

...view details