ಕರ್ನಾಟಕ

karnataka

ETV Bharat / sitara

ಲಹರಿ ವೇಲು ಪುತ್ರಿ ವಿವಾಹಕ್ಕೆ ಆಗಮಿಸಿ ಶುಭ ಕೋರಿದ ಟಾಲಿವುಡ್ ದಿಗ್ಗಜರು

ಲಹರಿ ವೇಲು ಪುತ್ರಿ ವರ್ಷ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಟಾಲಿವುಡ್​​ನ ಸಾಕಷ್ಟು ಗಣ್ಯರು ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದ್ದಾರೆ.

By

Published : Apr 29, 2019, 1:15 PM IST

ಅಲ್ಲು ಅರವಿಂದ್ ಕುಟುಂಬ

ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆಯ ಜಿ.ತುಳಸಿರಾಮ್ ನಾಯ್ಡು ವೇಲು ಅವರ ಪುತ್ರಿ ವರ್ಷ ಅವರ ವಿವಾಹ ಆರತಕ್ಷತೆ ಕಳೆದ ಶುಕ್ರವಾರ ಬೆಂಗಳೂರಿನ ತಾಜ್​ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಅದ್ಧೂರಿಯಾಗಿ ಜರುಗಿದೆ.

ನೂತನ ದಂಪತಿಗಳೊಂದಿಗೆ ಅಲ್ಲು ಸಿರೀಶ್​
ಲಹರಿ ವೇಲು ಪುತ್ರಿ ಆರತಕ್ಷತೆ ಕಾರ್ಯಕ್ರಮ

ಸಾಕಷ್ಟು ಗಣ್ಯರು ಈ ಸಮಾರಂಭಕ್ಕೆ ಆಮಿಸಿ ನೂತನ ವಧು-ವರರಿಗೆ ಶುಭ ಕೋರಿದರು. ವರ್ಷ ಕೈ ಹಿಡಿದ ಚರಣ್ ಟಾಲಿವುಡ್ ನಿರ್ಮಾಪಕ ಸುರೇಶ್ ದೇನಿನೇನಿ ಹಾಗೂ ನಾಗಲಕ್ಷ್ಮಿ ಅವರ ಪುತ್ರ. ಸ್ಯಾಂಡಲ್​​ವುಡ್​​​​​ನವರು ಮಾತ್ರವಲ್ಲದೆ ಟಾಲಿವುಡ್ ಖ್ಯಾತನಾಮರೂ ಕೂಡಾ ಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

ಆರತಕ್ಷತೆ ಕಾರ್ಯಕ್ರಮದಲ್ಲಿ ಟಾಲಿವುಡ್ ಖ್ಯಾತ ನಟ ಬಾಲಕೃಷ್ಣ

ಟಾಲಿವುಡ್​ನ ಹಿರಿಯ ನಟ ಬಾಲಕೃಷ್ಣ, ನಿರ್ಮಾಪಕ ರಾಘವೇಂದ್ರ ರಾವ್, ನಿರ್ಮಾಪಕ ಅಲ್ಲು ಅರವಿಂದ್ ದಂಪತಿ, ಅಲ್ಲು ಸಿರಿಶ್, ನಿರ್ಮಾಪಕ ಸುಬ್ಬರಾಮಿ ರೆಡ್ಡಿ, ನಿರ್ಮಾಪಕ ಸುರೇಶ್ ಬಾಬು ಹಾಗೂ ಇನ್ನಿತರ ತೆಲುಗು ಚಿತ್ರರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿದ್ದರು.

ನಿರ್ಮಾಪಕ ಕೆ. ರಾಘವೇಂದ್ರ ರಾವ್​

For All Latest Updates

TAGGED:

ABOUT THE AUTHOR

...view details