ಕರ್ನಾಟಕ

karnataka

By

Published : Jan 9, 2020, 7:01 PM IST

ETV Bharat / sitara

ಸೆಂಚುರಿ ಸ್ಟಾರ್ ಹೊಸ ಚಿತ್ರಕ್ಕೆ ತಮಿಳು ನಿರ್ದೇಶಕ ಆ್ಯಕ್ಷನ್ ಕಟ್...ಚಿತ್ರದ ಹೆಸರೇನು...?

ಶಿವರಾಜ್ ಕುಮಾರ್​​​​​​​​ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

Shivanna ravi arasu
ಶಿವಣ್ಣ, ರವಿ ಅರಸು

ಕನ್ನಡ ಚಿತ್ರರಂಗದಲ್ಲಿ ಎನರ್ಜಿಟಿಕ್​​​​​​​​​ ಹೀರೋ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್. ಸದ್ಯ ಭಜರಂಗಿ - 2 ಸಿನಿಮಾ ಶೂಟಿಂಗ್​​​​​ನಲ್ಲಿರುವ ಸೆಂಚುರಿ ಸ್ಟಾರ್, ಪಕ್ಕಾ ಮಾಸ್ ಟೈಟಲ್ ಹೊಂದಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ನಿರ್ದೇಶಕ ರವಿ ಅರಸು

ಶಿವಣ್ಣ ಅವರ ಹೊಸ ಚಿತ್ರಕ್ಕೆ ಆರ್​​ಡಿಎಕ್ಸ್​​​​ ಎಂದು ಹೆಸರಿಟ್ಟಿದ್ದು, ರವಿ ಅರಸು ಎಂಬ ತಮಿಳು ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನಲ್ಲಿ 'ಈಟಿ' ಎನ್ನುವ ಹಿಟ್ ಸಿನಿಮಾವನ್ನು ಕೊಟ್ಟಿರುವ ರವಿ ಅರಸು ಆರ್​ಡಿಎಕ್ಸ್​​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವರಾಜ್ ಕುಮಾರ್​​​​​​​​ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 1986ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ 'ಸತ್ಯಜ್ಯೋತಿ' ಚಿತ್ರವನ್ನು ನಿರ್ಮಿಸಿದ್ದ ತ್ಯಾಗರಾಜನ್ ಅವರ ಸತ್ಯಜ್ಯೋತಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ಶಿವರಾಜ್​ಕುಮಾರ್

ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆ 'ಸತ್ಯಜ್ಯೋತಿ' ಬ್ಯಾನರ್​​​​​​​​​​​​​​​​​​ನಲ್ಲಿ, ಇತ್ತೀಚೆಗೆ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಶಿವರಾಜ್ ಕುಮಾರ್ ಸಿನಿಮಾವನ್ನು ನಿರ್ಮಿಸುವ ಮೂಲಕ, ಈ ಸಂಸ್ಥೆ ಮತ್ತೆ ಕನ್ನಡದ ಕಡೆ ಮುಖ ಮಾಡಿದೆ . ಫೆಬ್ರವರಿ 19 ರಂದು ಆರ್​ಡಿಎಕ್ಸ್​​​​​​​​​​​​​​​​​​​​​​​​​​​​ ಸಿನಿಮಾ ಮುಹೂರ್ತಕ್ಕೆ ಚಿತ್ರತಂಡ ಪ್ಲ್ಯಾನ್​​​​​​​​​​​​​​ ಮಾಡಿದೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್' ಕೂಡಾ ಫೆಬ್ರವರಿ 19 ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯ ಎನ್ನುವಂತೆ ಮತ್ತೆ ಅದೇ ದಿನ ಆರ್​​​​ಡಿಎಕ್ಸ್​​​​​​​​​​​​​​​​​​​​​​​​​​​​​​​​​​​​​​​​​​​​​ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.

For All Latest Updates

TAGGED:

ABOUT THE AUTHOR

...view details