ಕರ್ನಾಟಕ

karnataka

ETV Bharat / sitara

ಸಿನಿಮಾ ಜತೆ 'ಮೊಬೈಲ್​​ ಕ್ಯಾಂಟೀನ್​' ನಡೆಸ್ತಾರೆ ಈ ನಿರ್ದೇಶಕ: ಅಷ್ಟಿಲ್ದೆ ಹೇಳ್ತಾರಾ ಕೈ ಕೆಸರಾದ್ರೆ... ಅಂತ - undefined

ಸಿನಿಲೋಕಕ್ಕೆ ಎಂಟ್ರಿಕೊಟ್ಟವರು ಇಲ್ಲೆ ನೆಲೆಯೂರಲು ಪ್ರಯತ್ನಿಸುತ್ತಾರೆ. ಬಣ್ಣದ ಲೋಕದಿಂದ ಅಷ್ಟು ಬೇಗನೆ ವಿಮುಖಗೊಳ್ಳಲು ಮನಸ್ಸು ಮಾಡಲ್ಲ. ಅಲ್ಲದೇ ಬೇರೆ ಯಾವುದೇ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಅದ್ರೆ 'ಮೂಕವಿಸ್ಮಿತ' ಚಿತ್ರದ ನಟ, ನಿರ್ದೆಶಕ ಹಾಗೂ ನಿರ್ಮಾಪಕ ಗುರುದತ್​ ಶ್ರೀಕಾಂತ್ ಸಿನಿಮಾ ಜತೆಗೆ ಹೋಟೆಲ್ ಉದ್ಯಮಕ್ಕೂ ಕೈ ಹಾಕಿದ್ದಾರೆ.

ಗುರುದತ್​ ಶ್ರೀಕಾಂತ್

By

Published : Jul 22, 2019, 9:28 AM IST

ಗುರು, ಮೊಬೈಲ್ ಕ್ಯಾಂಟೀನ್ ಮೂಲಕ ಬೆಂಗಳೂರಿನ ಜನರಿಗೆ ರುಚಿಯಾದ ತಿಂಡಿ-ಊಟ ಒದಗಿಸುತ್ತಿದ್ದಾರೆ. ನಿರ್ದೇಶಕನಾಗಬೇಕೆನ್ನುವ ಕನಸು ಕಿರಿಯ ವಯಸ್ಸಿನಲ್ಲಿಯೇ 'ಮೂಕ ವಿಸ್ಮಿತ' ಚಿತ್ರದ ಮೂಲಕ ನೆರವೇರಿಸಿ ಕೊಂಡ ಇವರು, ಆಕಸ್ಮಿಕವಾಗಿ ಹೋಟೆಲ್​ ಉದ್ಯಮದತ್ತ ಮುಖ ಮಾಡಿದ್ದಾರೆ. ವಿಶೇಷ ಅಂದರೆ ಇವರು ಮೊಬೈಲ್ ಕ್ಯಾಂಟೀನ್ ಶುರುಮಾಡಲು ಕಾರಣವಾಗಿದ್ದೆ ಮೂಕವಿಸ್ಮಿತ ಚಿತ್ರ.

ಮೊಬೈಲ್​ ಕ್ಯಾಂಟೀನ್ ಉದ್ಯಮಕ್ಕೆ ಕೈ ಹಾಕಿದ ನಿರ್ದೇಶಕ ಗುರುದತ್ ಶ್ರೀಕಾಂತ್

ಗುರುದತ್​​​, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಟೈಂನಲ್ಲಿ ಗಾಂಧಿ ನಗರದಲ್ಲಿರುವ ಐ‌ಡಿಸಿ ಹೊಟೇಲ್​​ ತಿಂಡಿಗೆ ಮನಸೋತು ಕಾಯಂ ಕಸ್ಟಮರ್ ಆದರಂತೆ. ಈ ವೇಳೆ ಹೋಟೆಲ್​ ಮಾಲೀಕ ರಾಘವ್ ಪರಿಚಯವಾಗುತ್ತದೆ. ಇವರ ಸ್ನೇಹ 'ಐಡಿಸಿ ಮೊಬೈಲ್ ಕ್ಯಾಂಟೀನ್' ಕಾನ್ಸೆಪ್ಟ್ ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ರಾಘವ್ ಅವರ ಸಲಹೆಯಂತೆ ಮೊಬೈಲ್ ಕ್ಯಾಂಟಿನ್ ಆರಂಭಿಸಿ ಕಳೆದ ಒಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಹೋಟೆಲ್​ನಲ್ಲಿ ಸುಮಾರು ಆರು ಹುಡುಗರ ನೇಮಿಸಿಕೊಂಡಿರುವ ಗುರುದತ್​​, ಯಾವುದೇ ಕೆಲಸ ಮಾಡಲು ಮುಜುಗರ ಪಡುವುದಿಲ್ಲ.

ಫೈವ್​​ ಸ್ಟಾರ್ ಹೊಟೇಲ್​​​ಗಳಂತೆ ಹೈಜೆನಿಕ್ ಆಗಿ ಸೌತ್​ ಇಂಡಿಯನ್​ ಪುಡ್ ಇಲ್ಲಿ ಸಿಗುತ್ತೆ. ಪ್ಲಾಸ್ಟಿಕ್ ಬಳಸದೆ ಪರಿಸರ ಸ್ನೇಹಿ ಅಡಿಕೆ ಪ್ಲೇಟ್ ಬಳಸಿ ತಿಂಡಿಕೊಡ್ತಾರೆ. ಇವರ ಕ್ಯಾಂಟೀನ್ ಎಲ್ಲಿರುತ್ತೋ ಅಲ್ಲಿ ತುಂಬಾ ಶುಚಿತ್ವ ಕಾಪಡಿಕೊಂಡು ಬಂದಿದ್ದಾರೆ. ಇವರ ಕ್ಯಾಂಟಿನ್ ನ ಮಸಾಲೆ ಇಡ್ಲಿ ಎಂದರೆ ಪೊಲೀಸ್ ಅಧಿಕಾರಿ ಗಳಿಂದ ಹಿಡಿದು ಸಾಫ್ಟ್‌ವೇರ್ ಇಂಜಿನಿಯರ್ ಗಳಿಗೂ ಅಚ್ಚು‌ ಮೆಚ್ಚು. ದಿನಕೊಂದು ಏರಿಯಾದಲ್ಲಿ ಕ್ಯಾಂಟೀನ್ ನಡೆಸುವ ಇವರು ಈ ಬ್ಯುಸಿ ಲೈಫ್​​ನಲ್ಲೂ ಸಿನಿಮಾ ಕೆಲದಿಂದ ದೂರವಾಗಿಲ್ಲ. ಸದ್ಯ ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ವರ್ಕ್​​​ನಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಐಡಿಸಿ ಜತೆಗೂಡಿ ಮೊಬೈಲ್ ಕ್ಯಾಂಟೀನ್​​ಗಳನ್ನು ಇಡೀ ಬೆಂಗಳೂರಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಸಿನಿಮಾ ನಿರ್ದೇಶನ ಮಡುವ ಚಿಂತನೆಯಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details