ಕರ್ನಾಟಕ

karnataka

ತಂದೆ ನಿಜಕ್ಕೂ ದೇವರ ಮಗ;ಆ ದಿನವನ್ನು ನೆನೆದು ಭಾವುಕರಾದ ಸೌಂದರ್ಯ ರಜನೀಕಾಂತ್​​​​​​​​

8 ವರ್ಷಗಳ ಹಿಂದಿನ ಪ್ರಮುಖ ಘಟನೆಯೊಂದನ್ನು ನೆನೆಸಿಕೊಂಡು ಸೂಪರ್​​ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ನನ್ನ ತಂದೆ ನಿಜಕ್ಕೂ ದೇವರ ಮಗ ಎಂದು ಹೇಳಿದ್ದಾರೆ.

By

Published : Jul 14, 2019, 7:46 PM IST

Published : Jul 14, 2019, 7:46 PM IST

ಸೌಂದರ್ಯ ರಜನೀಕಾಂತ್​​​​​​​​

13-07-2011 ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರದ ದಿನ. ಈ ದಿನ ನನಗೆ ಜೀವನಪೂರ್ತಿ ನೆನಪಿರುತ್ತದೆ ಎಂದು ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಹೇಳಿದ್ದಾರೆ. ಈ ದಿನದ ಒಂದು ಪ್ರಮುಖ ವಿಡಿಯೋವೊಂದನ್ನು ಕೂಡಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಿಂಗಪೂರ್​​ನಲ್ಲಿ ಚಿಕಿತ್ಸೆ ಮುಗಿಸಿಕೊಂಡು '2011 ರ ಜುಲೈ 13 ರ ರಾತ್ರಿ ಅಪ್ಪ ಮತ್ತೆ ಚೆನ್ನೈಗೆ ವಾಪಸ್ ಬಂದ ದಿನ ಇದು. ಈ ಸಂದರ್ಭದಲ್ಲಿ ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು. ಅಪ್ಪಾ, ನಿಜಕ್ಕೂ ನೀವು ದೇವರ ಮಗ, ನನ್ನ ತಂದೆ, ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿರುವ, ಇಂದಿಗೂ ಪ್ರಾರ್ಥಿಸುತ್ತಲೇ ಇರುವ ಹೃದಯಗಳಿಗೆ ನನ್ನ ಧನ್ಯವಾದಗಳು' ಎಂದು ಭಾವಪೂರ್ಣವಾಗಿ ಹೇಳಿಕೊಂಡು ಆ ದಿನದ ವಿಡಿಯೋವೊಂದನ್ನು ಸೌಂದರ್ಯ ಷೇರ್ ಮಾಡಿಕೊಂಡಿದ್ದಾರೆ.

ರಜನೀಕಾಂತ್​​​​​​​​

ಸೂಪರ್ ಸ್ಟಾರ್ ರಜನೀಕಾಂತ್ ಸದ್ಯಕ್ಕೆ 'ದರ್ಬಾರ್​​' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ.ಆರ್​​. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರ ರಜನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details