ಕರ್ನಾಟಕ

karnataka

ETV Bharat / sitara

ಪ್ರಕೃತಿಯ ಸಿಟ್ಟಿನಿಂದ ಉದ್ಭವಿಸಿರೋ ರೋಗವೇ ಕೊರೊನಾ : ನಟ ಸಿಹಿಕಹಿ ಚಂದ್ರು - sihi kahi chandru talk about covid

ಸದ್ಯದ ಪರಿಸ್ಥಿತಿಗೆ ಬಸವಣ್ಣನವರ ವಚನ ತುಂಬಾ ಅರ್ಥ ಪೂರ್ಣವಾಗಿದೆ ಅಂತ ಅವರು ತಿಳಿಸಿದ್ದು, ಪ್ರತಿಯೊಬ್ಬರು ಈ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯಲ್ಲೇ ಇರಿ, ಸಾಮಾಜಿಕ ಅಂತರ, ಕೈಗಳನ್ನ ತೊಳೆದುಕೊಳ್ಳಿರಿ..

sihi-kahi-chandru
ನಟ ಸಿಹಿಕಹಿ ಚಂದ್ರು

By

Published : May 25, 2021, 7:11 PM IST

ದೇಶದೆಲ್ಲೆಡೆ ಕೊರೊನಾ ಎಂಬ ಹೆಮ್ಮಾರಿಗೆ ಜನರು ತತ್ತರಸಿ ಹೋಗಿದ್ದಾರೆ. ರಾಜ್ಯ, ನಗರ ಹಾಗೂ ಹಳ್ಳಿಗಳ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಇಲ್ಲದ ಸಾಕಷ್ಟು ಜನ ಈ ಹೆಮ್ಮಾರಿಗೆ ಪ್ರಾಣ ಬೀಡುತ್ತಿದ್ದಾರೆ. ಈ ಬಗ್ಗೆ ಹಿರಿಯ ನಟ ಸಿಹಿಕಹಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.

ನಟ ಸಿಹಿಕಹಿ ಚಂದ್ರು ಮಾತನಾಡಿದರು

ಕೊರೊನಾ ಎಂಬ ವೈರಸ್​ನಿಂದ ನಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಳ್ಳುತ್ತಿದ್ದೇವೆ ಅಂತ ಬೇಸರವನ್ನ ವ್ಯಕ್ತಪಡಿಸಿರುವ ಅವರು, ಇದೆಕ್ಕೆಲ್ಲಾ ಕಾರಣ ನಾವುಗಳೇ. ಯಾಕೆಂದರೆ, ಪ್ರಕೃತಿಯ ಸಿಟ್ಟಿನಿಂದ ಉದ್ಭವಿಸಿರೋ ರೋಗವೇ ಕೊರೊನಾ ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ.

ನಟ ಸಿಹಿಕಹಿ ಚಂದ್ರು

ಸದ್ಯದ ಪರಿಸ್ಥಿತಿಗೆ ಬಸವಣ್ಣನವರ ವಚನ ತುಂಬಾ ಅರ್ಥ ಪೂರ್ಣವಾಗಿದೆ ಅಂತ ಅವರು ತಿಳಿಸಿದ್ದು, ಪ್ರತಿಯೊಬ್ಬರು ಈ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯಲ್ಲೇ ಇರಿ, ಸಾಮಾಜಿಕ ಅಂತರ, ಕೈಗಳನ್ನ ತೊಳೆದುಕೊಳ್ಳಿರಿ ಎಂದು ಜಾಗೃತಿ ಮೂಡಿಸಿದ್ದಾರೆ.

ಓದಿ:ಕರೀಬ್​ ಹಾಡಿಗೆ ಸ್ಟೆಪ್​ ಹಾಕಿದ ನೋರಾ: ಅಭಿಮಾನಿಗಳಿಗೆ ಚಾಲೆಂಜ್​!

ABOUT THE AUTHOR

...view details