ಕರ್ನಾಟಕ

karnataka

ETV Bharat / sitara

ಸಿನಿಮಾಗೆ ಸಂಬಂಧಿಸಿದ ಪುಸ್ತಕಕ್ಕೆ ಮುನ್ನುಡಿ ಬರೆದ ಕರುನಾಡ ಚಕ್ರವರ್ತಿ - actor MG shrinivas wife Shruti

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಪತ್ರಕರ್ತೆಯೊಬ್ಬರು ಬರೆದ 'ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ' ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ನಟ ಎಂ.ಜಿ. ಶ್ರೀನಿವಾಸ್ ಪತ್ನಿ ಶ್ರುತಿ ಈ ಪುಸ್ತಕವನ್ನು ಬರೆದಿದ್ದಾರೆ.

Filmi escapes in Karnataka
ಶಿವರಾಜ್​ಕುಮಾರ್

By

Published : Aug 17, 2020, 9:51 AM IST

ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿರುವುದು ಎಲ್ಲರಿಗೂ ಸಂತೋಷವಾಗಿದೆ. ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಡಿಸಿಎಂ ಜೊತೆ ಮಾತನಾಡಿರುವ ಅವರು ಈಗ ವಿನೂತನ ಪುಸ್ತಕವೊಂದಕ್ಕೆ ಮುನ್ನುಡಿ ಬರೆದು ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶ್ರುತಿ ಬರೆದ ಪುಸ್ತಕ 'ಫಿಲ್ಮಿ ಎಸ್ಕೇಪ್ಸ್​ ಇನ್ ಕರ್ನಾಟಕ'

ಪತ್ರಕರ್ತೆ ಶ್ರುತಿ ಇಂದಿರ ಲಕ್ಷ್ಮಿನಾರಾಯಣ ಬರೆದಿರುವ 'ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ' ಪುಸ್ತಕಕ್ಕೆ ಶಿವಣ್ಣ ಮುನ್ನುಡಿ ಬರೆದಿದ್ದಾರೆ. ಶ್ರೀನಿವಾಸ ಕಲ್ಯಾಣ, ಬೀರಬಲ್ ಚಿತ್ರದ ನಾಯಕ ಎಂ.ಜಿ. ಶ್ರೀನಿವಾಸ್ ಪತ್ನಿಯೇ ಶ್ರುತಿ. ಈಕೆ ಇಂಗ್ಲೀಷ್​​​​ನಲ್ಲಿ ಪುಸ್ತಕ ಬರೆದಿದ್ದು ಇವರಿಗೆ ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಇದೆ. 62 ಪುಟಗಳ ಈ ಪುಸ್ತಕವನ್ನು ಶ್ರುತಿ ಲೋನ್ಲಿ ಪ್ಲಾನೆಟ್ ಸಹಯೋಗದೊಂದಿಗೆ ಹೊರತಂದಿದ್ದಾರೆ.

ಶ್ರುತಿ, ಎಂ.ಜಿ. ಶ್ರೀನಿವಾಸ್

'ಫಿಲ್ಮಿ ಎಸ್ಕೇಪ್ಸ್​ ಇನ್ ಕರ್ನಾಟಕ' ಪುಸ್ತಕದಲ್ಲಿ ಸಿನಿಮಾಗಳು, ಲೊಕೇಶನ್ ಹಾಗೂ ರಾಜ್ಯದ ಸಂಸ್ಕೃತಿ ಬಗ್ಗೆ ತಿಳಿಸಲಾಗಿದೆ. ಕರ್ನಾಟಕದ ಅಪರೂಪದ ತಾಣಗಳು, ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳಗಳು, ಆ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಚಾಮರಾಜನಗರದಿಂದ ಬೀದರ್​ವರೆಗಿನ ಆಹಾರ ಪದ್ಧತಿ ಬಗ್ಗೆ ಸುಂದರ ಫೋಟೋಗಳ ಸಹಿತ ಶ್ರುತಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಈಗಾಗಲೇ ಬಿಡುಗಡೆ ಆಗಿದೆ.

ಶಿವರಾಜ್​ಕುಮಾರ್

ABOUT THE AUTHOR

...view details